ಗಂಗಾವತಿ(ಕೊಪ್ಪಳ):ಜೆಡಿಎಸ್ ಪಕ್ಷದಿಂದ ಘೋಷಣೆ ಮಾಡಲಾಗಿರುವ 93 ಅಭ್ಯರ್ಥಿಗಳಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಶೋಕ್ ಉಮಲೂಟಿ ಮೂಲತಃ ಬಿಜೆಪಿಯವರಾಗಿದ್ದು, ಈ ಅಭ್ಯರ್ಥಿಯನ್ನು ಬದಲಿಸುವಂತೆ ಒತ್ತಾಯಿಸಿ ಶೀಘ್ರ ನಿಯೋಗ ಹೋಗುವುದಾಗಿ ಟಿಕೆಟ್ ಆಕಾಂಕ್ಷಿ ಮಾದಿಗ ಸಮಾಜದ ಮುಖಂಡ ಸಂದೀಪ್ ತಿಳಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆಮಾತನಾಡಿದ ಅವರು, ಕನಕಗಿರಿ ಕ್ಷೇತ್ರದ ಜೆಡಿಎಸ್ ಕ್ಯಾಂಡಿಡೇಟ್ ಅಶೋಕ್ ಉಮಲೂಟಿ ಬಿಜೆಪಿ ಹಿನ್ನೆಲೆ ಹೊಂದಿದ್ದಾರೆ. ಉಮಲೂಟಿ ಪ್ರಬಲ ಸಮುದಾಯದ ಅಭ್ಯರ್ಥಿ ಅಲ್ಲದ ಕಾರಣ ಠೇವಣಿ ಕಳೆದುಕೊಂಡು ಸೋಲ ಅನುಭವಿಸಬೇಕಾಗುತ್ತದೆ. ಎಡಗೈ ಸಮುದಾಯಕ್ಕೆ ಸೇರಿದ ನನಗೆ ಟಿಕೆಟ್ ನೀಡಿದ್ದಲ್ಲಿ ಸುಮಾರು 40ರಿಂದ 50 ಸಾವಿರ ಮತಗಳು ನಮ್ಮವರದ್ದೇ ಸಿಗಲಿವೆ ಎಂದಿದ್ದಾರೆ.