ಗಂಗಾವತಿ: ಜಿಲ್ಲಾ ಪಂಚಾಯಿತಿಯಲ್ಲಿ ಕಿರಿಯ ಎಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಿ.ಎಂ.ರವಿಕುಮಾರ ಎಂಬುವವರು ಅಮಾನತು ಆದೇಶ ಹಾಗೂ ಮಾತೃ ಇಲಾಖೆಗೆ ಬಿಡುಗಡೆ ಮಾಡಿದ್ದ ಆದೇಶ ಪ್ರಶ್ನಿಸಿ ಕಾನೂನು ಮೊರೆ ಹೋಗುವ ಮೂಲಕ ಮತ್ತೆ ಹುದ್ದೆಯಲ್ಲಿ ಮುಂದುವರೆದ ಘಟನೆ ನಡೆದಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಸಾಲಿನಲ್ಲಿ ಕೈಗೊಂಡಿದ್ದ ಪ್ರವಾಹ ಪರಿಹಾರ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ ಎಂಬ ಸಾರ್ವಜನಿಕರ ಆರೋಪ ಮತ್ತು ದೂರುಗಳ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ ತನಿಖೆಗೆ ಆದೇಶಿಸಿದ್ದರು. ತನಿಖೆಯಿಂದಾಗಿ ಸಾಕಷ್ಟು ಅಕ್ರಮವಾಗಿರುವುದು ನಿಜ ಎಂದು ಪರಿಶೀಲನೆಯ ಹೊಣೆ ಹೊತ್ತ ಏಜನ್ಸಿ ನೀಡಿದೆ. ಈ ವರದಿ ಆಧರಿಸಿ ಇಲಾಖೆಯ ಒಟ್ಟು ನಾಲ್ಕು ಜನರನ್ನು ಅಮಾನತು ಮಾಡಿ ಸಿಇಒ ಆದೇಶ ಹೊರಡಿಸಿದ್ದರು.