ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ನ್ಯಾಯಾಧೀಶರ ಸಾಮೂಹಿಕ ವರ್ಗಾವಣೆ: ಹೊಸಬರ ನಿಯೋಜನೆ - ಗಂಗಾವತಿ ಲೇಟೆಸ್ಟ್​ ನ್ಯೂಸ್

ಗಂಗಾವತಿ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಜಿ.ಅನಿತಾ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಬೆಂಗಳೂರಿನ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಧೀಶರಾಗಿದ್ದ ವಿ.ನಾಗರಾಜ್ ಅವರನ್ನು ನಿಯೋಜಿಸಲಾಗಿದೆ.

judges transfer in Gangavathi
ಗಂಗಾವತಿಯಲ್ಲಿ ನ್ಯಾಯಾಧೀಶರ ಸಾಮೂಹಿಕ ವರ್ಗಾವಣೆ

By

Published : Apr 20, 2021, 2:37 PM IST

ಗಂಗಾವತಿ:ಇಲ್ಲಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಜೆಎಂಎಫ್​​ಸಿ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳ ನ್ಯಾಯಾಧೀಶರನ್ನು ಸರ್ಕಾರ ಏಕಕಾಲಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಜಿ.ಅನಿತಾ ಅವರ ಸ್ಥಾನಕ್ಕೆ ಬೆಂಗಳೂರಿನ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಧೀಶರಾಗಿದ್ದ ವಿ.ನಾಗರಾಜ್ ಅವರನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಸಿವಿಲ್ ಜೆಎಂಎಫ್​​ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿದ್ದ ಹೆಚ್.ಡಿ.ಗಾಯತ್ರಿ ಅವರಿಂದ ತೆರವಾದ ಸ್ಥಾನಕ್ಕೆ ಮೈಸೂರಿನ ಜೆಎಂಎಫ್​ಸಿ ಮೂರನೇ ಕೋರ್ಟ್​ನ ನ್ಯಾಯಾಧೀಶೆ ಗೌರಮ್ಮ ಅವರನ್ನು ನಿಯೋಜಿಸಲಾಗಿದೆ.

ಇಲ್ಲಿನ ಮುಖ್ಯ ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ರಹೇಮಲಿ ಮೌಲಸಾಬ (ಆರ್.ಎಂ.) ನದಾಫ್ ಅವರ ಸ್ಥಾನಕ್ಕೆ ಹುಬ್ಬಳ್ಳಿಯ ಜೆಎಂಎಫ್​ಸಿ 2ನೇ ಕೋರ್ಟ್​ನ ನ್ಯಾಯಾಧೀಶರಾಗಿದ್ದ ವಿಶ್ವನಾಥ್ ವಿ. ಮುಗಟ್ಟಿ ಅವರನ್ನು ನಿಯೋಜಿಸಲಾಗಿದೆ.

ಓದಿ:ರೈತರು-ಪೊಲೀಸರ ಮಧ್ಯೆ ವಾಗ್ವಾದ: 30ಕ್ಕೂ ಹೆಚ್ಚು ರೈತರ ಮೇಲೆ ಪ್ರಕರಣ

ABOUT THE AUTHOR

...view details