ಕರ್ನಾಟಕ

karnataka

ETV Bharat / state

ಆನೆಗೊಂದಿ ನವವೃಂದಾವನದಲ್ಲಿ ಜಯತೀರ್ಥರ ಆರಾಧನೆ - Navavrundavana Anegondi news

ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಧ್ವ ಸಂಪ್ರದಾಯದ ಪ್ರಚಾರಕರಾದ ಜಯತೀರ್ಥಯತಿಗಳ ಆರಾಧನಾ ಮಹೋತ್ಸವವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು..

ನವವೃಂದಾವನದಲ್ಲಿ ಜಯತೀರ್ಥರ ಆರಾಧನೆ
ನವವೃಂದಾವನದಲ್ಲಿ ಜಯತೀರ್ಥರ ಆರಾಧನೆ

By

Published : Jul 10, 2020, 9:35 PM IST

ಗಂಗಾವತಿ: ತುಂಗಭದ್ರಾ ನದಿಯ ನಡುಗಡ್ಡೆ ಆನೆಗೊಂದಿ ಬಳಿಯ ನವವೃಂದಾವನದಲ್ಲಿ ಜಯತೀರ್ಥರ ಆರಾಧನಾ ಮಹೋತ್ಸವ ಜರುಗಿತು. ಈ ಸಂದರ್ಭದಲ್ಲಿ ಜಯತೀರ್ಥರು ರಚಿಸಿದ ಧಾರ್ಮಿಕ ಗ್ರಂಥಗಳ ಪಾರಾಯಣ, ಗ್ರಂಥಗಳ ಮೇಲೆ ರಚಿತ ಭಾಷ್ಯಗಳ ಬಗ್ಗೆ ವಿದ್ವಾಂಸರು ಉಪನ್ಯಾಸ ನೀಡಿದರು.

ನವವೃಂದಾವನದಲ್ಲಿ ಜಯತೀರ್ಥರ ಆರಾಧನೆ

ಭಜನೆ, ಸಂಗೀತ, ಧರ್ಮೋಪದೇಶ, ಸುಹಾಸಿನಿಯರ ಸಮಾರಾಧನೆ ನಡೆದವು. ಪಂಡಿತರಾದ ಕಡಪ ಧೀರೇಂದ್ರ ಆಚಾರ್, ಆಯಾಚಿ ಧೀರೇಂದ್ರ ಆಚಾರ್ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಪ್ರಮುಖರಾದ ಗುರುಪ್ರಸಾದ್ ಆಚಾರ್, ಗುರುಪ್ರಸಾದ್, ಪವಮಾನ ಆಚಾರ್, ನರಸಿಂಹ ಆಚಾರ್, ಸುಮಂತ್ ಕುಲಕರ್ಣಿ, ನರಸಿಂಹ ಆಚಾರ್, ವಿಜಯೇಂದ್ರ ಭಾಗಿಯಾಗಿದ್ದರು.

ABOUT THE AUTHOR

...view details