ಗಂಗಾವತಿ(ಕೊಪ್ಪಳ): ಕಾಂಗ್ರೆಸ್ ಸಮಿತಿ ವತಿಯಿಂದ ಗಂಗಾವತಿ ನಗರ ಹಾಗೂ ಕನಕಗಿರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಪ್ರಯುಕ್ತ ಜನಧ್ವನಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಪಕ್ಷದ ವತಿಯಿಂದ ಗಂಗಾವತಿ, ಕನಕಗಿರಿಯಲ್ಲಿ ಜನಧ್ವನಿ ಪ್ರತಿಭಟನೆ - ಗಂಗಾವತಿ ಸುದ್ದಿ
ರಾಜೀವ್ ಗಾಂಧಿ ಹಾಗೂ‘ ದೇವರಾಜ ಅರಸು ಅವರ ಜನ್ಮದಿನಾಚರಣೆ ಪ್ರಯುಕ್ತ ಗಂಗಾವತಿ ನಗರ ಹಾಗೂ ಕನಕಗಿರಿಯಲ್ಲಿ ಜನಧ್ವನಿ ಪ್ರತಿಭಟನೆ ನಡೆಸಲಾಯಿತು.
![ಕಾಂಗ್ರೆಸ್ ಪಕ್ಷದ ವತಿಯಿಂದ ಗಂಗಾವತಿ, ಕನಕಗಿರಿಯಲ್ಲಿ ಜನಧ್ವನಿ ಪ್ರತಿಭಟನೆ Janadwani protests in Gangavati and Kanakagiri by Congress party](https://etvbharatimages.akamaized.net/etvbharat/prod-images/768-512-8495236-708-8495236-1597935933880.jpg)
ಕಾಂಗ್ರೆಸ್ ಪಕ್ಷದ ವತಿಯಿಂದ ಗಂಗಾವತಿ, ಕನಕಗಿರಿಯಲ್ಲಿ ಜನಧ್ವನಿ ಪ್ರತಿಭಟನೆ
ಕಾಂಗ್ರೆಸ್ ಪಕ್ಷದ ವತಿಯಿಂದ ಗಂಗಾವತಿ, ಕನಕಗಿರಿಯಲ್ಲಿ ಜನಧ್ವನಿ ಪ್ರತಿಭಟನೆ
ಕೊರೊನಾ ಪರಿಕರಗಳ ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರವಾಗಿದೆ. ಸುಗ್ರೀವಾಜ್ಞೆ ದುರ್ಬಳಕೆ ಮಾಡಿಕೊಂಡು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಬಂಡವಾಳಶಾಯಿಗಳಿಗೆ ಬೆಂಬಲ ನೀಡಲಾಗುತ್ತಿದೆ. ಸರ್ಕಾರ ಕೂಡಲೇ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಗಂಗಾವತಿಯಲ್ಲಿ ನಗರ ಬ್ಲಾಕ್ ಅಧ್ಯಕ್ಷ ಶಾಮೀದ ಮನಿಯಾರ ಹಾಗೂ ಕನಕಗಿರಿಯಲ್ಲಿ ಬ್ಲಾಕ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮೊದಲ ಮತ್ತು ಎರಡನೇ ಸಾಲಿನ ಮುಖಂಡರು ಪಾಲ್ಗೊಂಡಿದ್ದರು.