ಕರ್ನಾಟಕ

karnataka

By

Published : Apr 10, 2020, 6:00 PM IST

ETV Bharat / state

ಸೋಂಕಿತರಿರುವ ಕಡೆ ಸೀಲ್​ಡೌನ್​ ಜಾರಿ ಅವಶ್ಯ: ಶಾಸಕ ಹಿಟ್ನಾಳ್​​

ಬ್ಯಾಂಕ್​​, ಬೀಜ ಗೊಬ್ಬರದ ಅಂಗಡಿಗಳ ಹಾಗೂ ಪಡಿತರ ಅಂಗಡಿ ಮುಂದೆ ಜನರು ಗುಂಪು ಸೇರುವುದನ್ನು ಪೊಲೀಸರು ತಪ್ಪಿಸಬೇಕು ಎಂದು ಶಾಸಕರು ಸೂಚಿಸಿದರು.

Koppal MLA Raghavendra Hitnall
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್

ಕೊಪ್ಪಳ: ಬೆಂಗಳೂರು, ಮೈಸೂರು ಸೇರಿದಂತೆ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಜಿಲ್ಲೆಗಳನ್ನು ಸೀಲ್​​​​​ಡೌನ್​ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಇದೆ. ಇದು ಅವಶ್ಯವೂ ಹೌದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.

ಕೊಪ್ಪಳದಲ್ಲಿ ಮಾತನಾಡಿದ ಅವರು, ಕೊರೊನಾ ಒಬ್ಬರಿಗೆ ಹರಡಿದರೆ ನೂರಾರು ಜನರಿಗೆ ಹರಡುತ್ತದೆ. ಅದನ್ನು ನಿಯಂತ್ರಿಸುವ ವಿಧಾನ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ವೇಳಾಪಟ್ಟಿ ಹೊರಡಿಸಿದೆ ಎಂದರು.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಹರಡುವಿಕೆ ಪ್ರಮಾಣ ಕಡಿಮೆ. ಇದಕ್ಕೆ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳು. ನಮ್ಮ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಇದಕ್ಕೆ ಜಿಲ್ಲಾಡಳಿತದ ಪರಿಶ್ರಮ ಮತ್ತು ಜನರ ಸಹಕಾರವೇ ಕಾರಣ ಎಂದು ಹೇಳಿದರು.

ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾಗಿಲ್ಲ ಎಂದು ಯಾರೂ ಬೇಜವಾಬ್ದಾರಿತನ ತೋರಿಸಬಾರದು. ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿದಾರರೇ ನೇರವಾಗಿ ರೈತರ ಹೊಲಕ್ಕೆ ಹೋಗಿ ಅವರ ಉತ್ಪನ್ನ ಖರೀದಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದರು.

ABOUT THE AUTHOR

...view details