ಕೊಪ್ಪಳ:ನಾನು ಕುರುಬ ಅಲ್ಲ, ಅದಕ್ಕೂ ಮೊದಲು ನಾನೊಬ್ಬ ಹಿಂದು. ಸಿದ್ದರಾಮಯ್ಯ ಕುರುಬರ ನಾಯಕ ಅಲ್ಲ. ಅವರೊಬ್ಬ ಜಾತಿವಾದಿ ಎಂದು ಹೇಳಿಕೆ ನೀಡುವ ಮೂಲಕ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರ ಮೈಯಲ್ಲಿ ಜಾತಿವಾದದ ರಕ್ತ ಹರಿಯುತ್ತಿದೆ. ಅವರ ಮೈಯಲ್ಲಿ ಕನಕದಾಸ, ಸಂಗೊಳ್ಳಿ ರಾಯಣ್ಣರ ರಕ್ತ ಹರಿಯುತ್ತಿಲ್ಲ. ಮುಂಬರುವ ದಿನದಲ್ಲಿ ಕುರುಬರನ್ನು ಸಿದ್ದರಾಮಯ್ಯ ದೂರ ತಳ್ಳುತ್ತಾರೆ. ಇನ್ನು ಆದಾಯ ತೆರಿಗೆ ಇಲಾಖೆ ದಾಳಿಯನ್ನು ಸಿಎಂ ಗೌಪ್ಯವಾಗಿಡದೇ ಬಹಿರಂಗ ಮಾಡಿದ್ದಾರೆ. ಹೀಗೆ ಬಹಿರಂಗ ಮಾಡಿದ ಕುಮಾರಸ್ವಾಮಿ ಅಯೋಗ್ಯ. ಗೌಪ್ಯತೆ ಕಾಪಾಡಲು ವಿಫಲವಾದ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದರು.