ಗಂಗಾವತಿ: ಸರಕು ಸಾಗಿಸುವ ಪ್ರತಿಷ್ಠಿತ ಖಾಸಗಿ ಸಂಸ್ಥೆ ಪ್ಯಾಕರ್ಸ್ ಅಂಡ್ ಮೂವರ್ಸ್ ಸಂಸ್ಥೆಗೆ ಸೇರಿದ ವಾಹನದಲ್ಲಿ ಕಸಾಯಿಖಾನೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಗಂಗಾವತಿ: ಮೂವರ್ಸ್ ಅಂಡ್ ಪ್ಯಾಕರ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಣೆ - ಅಕ್ರಮವಾಗಿ ಜಾನುವಾರು ಸಾಗಾಟ
ರಾಜ್ಯದಲ್ಲಿ ಗೋ ಹತ್ಯೆ ಕಾಯ್ದೆ ಜಾರಿಗೆ ಬಂದರೂ ಅಕ್ರಮವಾಗಿ ರಾಸುಗಳನ್ನು ಸಾಗಿಸುತ್ತಿರುವ ಪ್ರಕರಣಗಳು ವರದಿ ಆಗುತ್ತಲೇ ಇವೆ. ಇಂತಹ ಮತ್ತೊಂದು ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ. ವೂವರ್ಸ್ ಅಂಡ್ ಪ್ಯಾಕರ್ಸ್ ವಾಹನದಲ್ಲಿ ಗೋವುಗಳನ್ನ ಸಾಗಿಸುತ್ತಿದ್ದ ವಾಹನ ಹಾಗೂ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
![ಗಂಗಾವತಿ: ಮೂವರ್ಸ್ ಅಂಡ್ ಪ್ಯಾಕರ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಣೆ illegal-cattle-trafficking-in-a-mowers-and-packers-vehicle](https://etvbharatimages.akamaized.net/etvbharat/prod-images/768-512-11604248-thumbnail-3x2-vish.jpg)
ಸರಕು ಸಾಗಾಣಿಕೆಯ ವಾಹನದಲ್ಲಿ ಪ್ರಾಣಿಗಳ ಆರ್ತನಾದ ಆಲಿಸಿದ ಶ್ರೀಕಾಂತ್ ಎಂಬುವರರು ಹಿಂಬಾಲಿಸಿದ್ದಾರೆ. ಕೊನೆಗೆ ನಗರದ ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿ ವಾಹನ ನಿಲ್ಲಿಸಿ ನೋಡಿದಾಗ ಒಳಗೆ ಆರು ಜಾನುವಾರುಗಳು ಇರುವುದು ಪತ್ತೆಯಾಗಿದೆ.
ಕೂಡಲೇ ವಾಹನ ತಡೆದು ಪೊಲೀಸ್ ಠಾಣೆಗೆ ಕರೆತಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಾಹನ ಚಾಲಕ ಮತ್ತು ಕ್ಲೀನರ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಶ್ರೀರಾಮನಗರದಿಂದ ಗಿಣಿಗೇರಾಕ್ಕೆ ಅಲ್ಲಿಂದ ಬೆಂಗಳೂರಿಗೆ ಜಾನುವಾರುಗಳನ್ನು ಕಳುಹಿಸಲಾಗುತಿತ್ತು ಎಂದು ಪೊಲೀಸರ ವಿಚಾರಣೆಯಲ್ಲಿ ವಾಹನದ ಚಾಲಕ ಮತ್ತು ಕ್ಲೀನರ್ ಮಾಹಿತಿ ನೀಡಿದ್ದಾರೆ.