ಗಂಗಾವತಿ: ತಹಶೀಲ್ದಾರ್ ಹುದ್ದೆಯಲ್ಲಿ ಕಳೆದ ಆರು ವಾರಗಳಿಂದ ಸ್ವತಂತ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ವರ್ಣಿತ್ ನೆಗೀ, ಇದೀಗ ಬಿಡುಗಡೆಯಾಗಿದ್ದಾರೆ.
ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ: ರೇಣುಕಾ ಪ್ರಭಾರ - ತಹಶೀಲ್ದಾರ್ ಆಗಿ ಆರು ವಾರ ಕಾರ್ಯನಿರ್ವಹಿಸಿದ ವರ್ಣಿತ್ ನೆಗೀ ಸುದ್ದಿ
ಆರು ವಾರದ ಕಾಲಾವಧಿ ಮುಗಿದ ಹಿನ್ನೆಲೆ ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ವರ್ಣಿತ್ ನೆಗೀ ಅವರನ್ನು ಬಿಡುಗಡೆಗೊಳಿಸಲಾಗಿದೆ.

ತಹಸೀಲ್ದಾರ್ ಹುದ್ದೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ
ಆರು ವಾರದ ಕಾಲಾವಧಿ ಮುಗಿದ ಹಿನ್ನೆಲೆ ಅಧಿಕಾರಿಗೆ, ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ನೇತೃತ್ವದಲ್ಲಿನ ಕಂದಾಯ ಸಿಬ್ಬಂದಿ ಬೀಳ್ಕೊಟ್ಟರು. ಹಾಲಿ ತಹಶೀಲ್ದಾರ್ ಹುದ್ದೆಯಲ್ಲಿ ಎಂ. ರೇಣುಕಾ ಅವರನ್ನು ಪ್ರಭಾರ ಅಧಿಕಾರವಹಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ಇದನ್ನೂ ಓದಿ:ಗಲ್ವಾನ್ ಕಣಿವೆಗೆ ಭೇಟಿ ನೀಡಲಿರುವ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ