ಗಂಗಾವತಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸುರೇಶ್ ಕುಮಾರ್ ಅವರಿಗೆ ಶಿಕ್ಷಕ ವಲಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೂರಾರು ಮನವಿ ನೀಡಿದರು.
ಗಂಗಾವತಿಯಲ್ಲಿ ಶಿಕ್ಷಣ ಸಚಿವರು... ದೂರು ನೀಡಲು ಮುಗಿಬಿದ್ದ ಶಿಕ್ಷಕ ವೃಂದ! - latest news of sureshkumar
ಗಂಗಾವತಿಗೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಸುರೇಶ್ ಕುಮಾರ್ ಅವರಿಗೆ ಶಿಕ್ಷಕ ವಲಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೂರಾರು ಮನವಿ ಸಲ್ಲಿಸಿದರು.
![ಗಂಗಾವತಿಯಲ್ಲಿ ಶಿಕ್ಷಣ ಸಚಿವರು... ದೂರು ನೀಡಲು ಮುಗಿಬಿದ್ದ ಶಿಕ್ಷಕ ವೃಂದ!](https://etvbharatimages.akamaized.net/etvbharat/prod-images/768-512-4435093-thumbnail-3x2-koppaljpg.jpg)
ಸುರೇಶ್ ಕುಮಾರ್
ಶಿಕ್ಷಣ ಸಚಿವರಿಗೆ ಶಿಕ್ಷಕ ವಲಯದ ಕಂಪ್ಲೈಂಟ್ಗಳ ಮಹಾಪೂರ !
ಪದವೀಧರ ನಿರುದ್ಯೋಗಿ ಶಿಕ್ಷಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಅನುದಾನಿತ, ಅನುದಾನ ರಹಿತ ಶಿಕ್ಷಕರ ಸಂಘ ಹೀಗೆ ನಾನಾ ಸಂಘಟನೆಗಳು ತಮ್ಮ ಸಮಸ್ಯೆಗಳ ದೂರು ಸಲ್ಲಿಸಿದರು.
ವಯೋಮಿತಿ ಮೀರುತ್ತಿದ್ದರೂ ನೇಮಕಾತಿ ನಡೆಯುತ್ತಿಲ್ಲವೆಂದು, ನೇಮಕಾತಿ ಆಗಿದ್ದರೂ ಆದೇಶ ಸಿಕ್ಕಿಲ್ಲ, ಕಳೆದ ನಾಲ್ಕಾರು ತಿಂಗಳಿಂದ ವೇತನ ಸಿಕ್ಕಿಲ್ಲ ಎಂದು ಕೆಲವರು ಮನವಿಗಳ ಮೂಲಕ ಸಚಿವರ ಗಮನ ಸೆಳೆದರು.