ಕರ್ನಾಟಕ

karnataka

ETV Bharat / state

ಕೊಪ್ಪಳ: ವರ್ಗಾವಣೆಗೊಂಡ ಡಿಸಿ ದಂಪತಿಯಿಂದ ದುರ್ಗಾ ದೇಗುಲದಲ್ಲಿ ಹೋಮ - ಹವನ - Homa havana by Suralkar couple

ಸುರಾಳ್ಕರ್ ದಂಪತಿ ದುರ್ಗಾ ಬೆಟ್ಟದ ದೇಗುಲದಲ್ಲಿ ಚಂಡಿಕಾ ಹೋಮ, ಲಲಿತಾ ಸಹಸ್ರನಾಮವಳಿ ಹವನ ಮಾಡಿಸಿದರು.

Homa havana by Vikas Kishore Suralkar couple in koppala durga hill
ವಿಕಾಸ್ ಕಿಶೋರ್ ಸುರಾಳ್ಕರ್ ದಂಪತಿಯಿಂದ ಹೋಮ-ಹವನ

By

Published : Jul 15, 2022, 4:46 PM IST

ಗಂಗಾವತಿ (ಕೊಪ್ಪಳ):ಕೊಪ್ಪಳ ಜಿಲ್ಲೆಯಿಂದ ವರ್ಗಾವಣೆಯಾಗಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಶುಕ್ರವಾರದಂದು ಗಂಗಾವತಿ ತಾಲೂಕಿನ ದುರ್ಗಾ ಬೆಟ್ಟದ ದೇಗುಲದಲ್ಲಿ ಹೋಮ - ಹವನ, ಪೂಜೆ ಮಾಡಿಸಿದ್ದಾರೆ.

ವಿಕಾಸ್ ಕಿಶೋರ್ ಸುರಾಳ್ಕರ್ ದಂಪತಿ

ಆನೆಗೊಂದಿ ಸಮೀಪ ಇರುವ ದುರ್ಗಾಬೆಟ್ಟಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮತ್ತು ಪತ್ನಿ ಪಾಯಲ್ ಸುರಾಳ್ಕರ್ ಚಂಡಿಕಾ ಹೋಮ, ಲಲಿತಾ ಸಹಸ್ರನಾಮವಳಿ ಹವನ ಮಾಡಿಸಿದರು. ಒಂದು ಗಂಟೆ ಕಾಲ ಹೋಮ ನಡೆಸಿದ ಸುರಾಳ್ಕರ್ ದಂಪತಿ ಬಳಿಕ ಹೋಮ ಕುಂಡಕ್ಕೆ ಪೂರ್ಣಾಹುತಿ ನೀಡಿದರು. ದೇಗುಲದ ಪ್ರಧಾನ ಅರ್ಚಕ ಬ್ರಹ್ಮಯ್ಯ ನೇತೃತ್ವ ವಹಿಸಿದ್ದರು.

ಸುರಾಳ್ಕರ್ ದಂಪತಿಯಿಂದ ಹೋಮ-ಹವನ

ಬಳಿಕ‌ ದೇಗುಲದ ವತಿಯಿಂದ ಜಿಲ್ಲಾಧಿಕಾರಿ ಮತ್ತು ಅವರ ಪತ್ನಿಯನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕೊಪ್ಪಳ ಜಿಲ್ಲೆಯಲ್ಲಿ ಎರಡು ವರ್ಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅವರನ್ನು ಸರ್ಕಾರ ಇತ್ತೀಚೆಗೆ ಕೆಪಿಎಸ್​​​​ಸಿ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಿ ವರ್ಗಾವಣೆ ಮಾಡಿದೆ.

ಇದನ್ನೂ ಓದಿ:ವಿಜಯಪುರ: ಹೆಚ್ಚುತ್ತಿರುವ ಅಪಘಾತ ತಪ್ಪಿಸಲು ವಿಶಿಷ್ಟ ಆಚರಣೆಗೆ ಮುಂದಾದ ಜನ

ABOUT THE AUTHOR

...view details