ಕರ್ನಾಟಕ

karnataka

By

Published : May 2, 2020, 9:33 PM IST

ETV Bharat / state

ಕುಷ್ಟಗಿಯಲ್ಲಿ ಆಲಿಕಲ್ಲು ಸಹಿತ ಮಳೆ: ಬಿತ್ತನೆ ಕಾರ್ಯದತ್ತ ರೈತನ ಒಲವು

ಕೊಪ್ಪಳದ ಕುಷ್ಟಗಿಯಲ್ಲಿ ಭರಣಿ ಮಳೆಯಾಗಿದ್ದು, ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ವರುಣನ ಆಗಮನದಿಂದ ಸಂತಸಗೊಂಡಿದ್ದಾರೆ.

Hailstone rain in Koppal: farmers favors to cultivation
ಕುಷ್ಟಗಿಯಲ್ಲಿ ಆಲಿಕಲ್ಲಿ ಸಹಿತ ಮಳೆ: ಬಿತ್ತನೆ ಕಾರ್ಯದತ್ತ ರೈತನ ಒಲವು

ಕುಷ್ಟಗಿ (ಕೊಪ್ಪಳ):ತಾಲೂಕಿನಲ್ಲಿ ಭರಣಿ ಮಳೆ ಅಲ್ಲಲ್ಲಿ ಆರಂಭಗೊಂಡಿದ್ದು, ಇಷ್ಟು ದಿನ ಬಿಸಿಲಿನಿಂದ ಕಾದ ಕೆಂಡದಂತಾಗಿದ್ದ ಕುಷ್ಟಗಿ ಸದ್ಯ ತಣ್ಣಗಾಗಿದೆ.

ನಗರದ ಪುರ್ತಗೇರಾ, ಕಾಟಾಪುರ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಬಿದ್ದಿದೆ. ಕೊರೊನಾ ಭೀತಿಯ ನಡುವೆಯೂ ಬಿತ್ತನೆ ಕಾರ್ಯ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ.

ಬೆಳಗಿನ ಜಾವ ಆರಂಭವಾಗಿದ್ದ ಮಳೆ ಗಂಟೆಗೂ ಅಧಿಕ ಹೊತ್ತು ಹದವಾಗಿ ಸುರಿಯಿತು. ಈ ಮಳೆಯಿಂದ ರೈತನ ಮೊಗದಲ್ಲಿ ಸಂತಸ ಕಂಡು ಬಂದಿದ್ದು, ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬಿತ್ತನೆ ಬೀಜದ ಕುರಿತು ಮಾಹಿತಿ ಪಡೆಯುತ್ತಿರುವುದು ಕಂಡು ಬಂತು.

ABOUT THE AUTHOR

...view details