ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ಧಾನ್ಯ ಕೊಳೆಯುವ ಸ್ಥಿತಿಯಲ್ಲಿ ಪತ್ತೆ - ಗಂಗಾವತಿ ತಾಲ್ಲೂಕು ಪಂಚಾಯಿತಿಯಲ್ಲಿ ಕೊಳೆಯುವ ಸ್ಥಿತಿಯಲ್ಲಿ ಧಾನ್ಯ ಪತ್ತೆ

ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಯಲ್ಲಿ ಸಂತ್ರಸ್ತರಾದವರಿಗೆ ನೀಡಲೆಂದು ತಾಲ್ಲೂಕಿನ ವಿವಿಧ ಭಾಗದಿಂದ ಸಂಗ್ರಹಿಸಿದ್ದ ಧಾನ್ಯ ವಿಲೇವಾರಿಯಾಗದೇ ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಕೊಳೆಯುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ರೆ ಈ ಬಗ್ಗೆ ತಾಲ್ಲೂಕು ಪಂಚಾಯತ್ ಇಒ ಸ್ಪಷ್ಟನೆ ಕೊಟ್ಟಿದ್ದಾರೆ.

ಧಾನ್ಯ ಕೊಳೆಯುವ ಸ್ಥಿತಿಯಲ್ಲಿ ಪತ್ತೆ

By

Published : Oct 13, 2019, 1:25 PM IST

ಗಂಗಾವತಿ:ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಯಲ್ಲಿ ಸಂತ್ರಸ್ತರಾದವರಿಗೆ ನೀಡಲು ಎಂದು ತಾಲ್ಲೂಕಿನ ವಿವಿಧ ಭಾಗದಿಂದ ಸಂಗ್ರಹಿಸಿದ್ದ ಧಾನ್ಯ ವಿಲೇವಾರಿಯಾಗದೇ ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಕೊಳೆಯುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ಧಾನ್ಯ ಕೊಳೆಯುವ ಸ್ಥಿತಿಯಲ್ಲಿ ಪತ್ತೆ

ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧದಲ್ಲಿ ಕಂಡು ಬಂದ ಈ ದುಸ್ಥಿತಿಯನ್ನು ಕೆಲ ಸಂಘಟನೆಯ ಯುವಕರು ಬೆಳಕಿಗೆ ತಂದಿದ್ದಾರೆ. ಸುಮಾರು 80 ಕ್ಕೂ ಹೆಚ್ಚು ಮೂಟೆಗಳಲ್ಲಿ ಸಾವಿರಾರು ಕೆಜಿ ಅಕ್ಕಿ ಹಾಳಾಗುತ್ತಿದೆ.

ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ತಾಲ್ಲೂಕು ಪಂಚಾಯಿತಿ ಇಒ ತಿಮ್ಮಾನಾಯ್ಕ್, ಅದು ಸಿದ್ದರಾಪುರದ ಮಹಿಳೆಯರು ತಂದಿಟ್ಟಿರುವ ಅಕ್ಕಿ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟರು.

For All Latest Updates

TAGGED:

ABOUT THE AUTHOR

...view details