ಕರ್ನಾಟಕ

karnataka

ETV Bharat / state

ರಾಮ ಮಂದಿರ ನಿರ್ಮಾಣ: 5 ಲಕ್ಷ ದೇಣಿಗೆ ನೀಡಿದ ಗಂಗಾವತಿ ಶಾಸಕ - donated-rs-5-lakh-to-ayodhya

ನಿಧಿ ಸಮರ್ಪಣಾ ಮಹಾಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಂಗಾವತಿ ಶಾಸಕ, ಭವ್ಯ ರಾಮಮಂದಿರ ದೇಗುಲ ನಿರ್ಮಾಣ ಕಾರ್ಯಕ್ಕೆ ನೆರವಾಗುವ ಉದ್ದೇಶಕ್ಕಾಗಿ ಐದು ಲಕ್ಷ ರೂ. ಮೊತ್ತದ ಚೆಕ್​ ನೀಡಿದರು.

ಗಂಗಾವತಿ ಶಾಸಕ
ಗಂಗಾವತಿ ಶಾಸಕ

By

Published : Jan 15, 2021, 10:55 PM IST

ಗಂಗಾವತಿ:ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಮಂದಿರ ದೇಗುಲ ನಿರ್ಮಾಣ ಕಾರ್ಯಕ್ಕೆ ನೆರವಾಗುವ ಉದ್ದೇಶಕ್ಕಾಗಿ ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಐದು ಲಕ್ಷ ರೂ. ಮೊತ್ತದ ಚೆಕ್​ ನೀಡಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ನಿಧಿ ಸಮರ್ಪಣಾ ಮಹಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ವೇದಿಕೆ ಮೇಲಿದ್ದ ನಾಗಭೂಷಣ ಶಿವಾಚಾರ್ಯ ಸಮ್ಮುಖದಲ್ಲಿ ಅಭಿಯಾನದ ಸಂಚಾಲಕ ರವೀಂದ್ರ ಅವರಿಗೆ ಹಸ್ತಾಂತರಿಸಿದರು.

ನಿಧಿ ಸಮರ್ಪಣಾ ಮಹಾ ಅಭಿಯಾನ ಕಾರ್ಯಕ್ರಮ

ಬಳಿಕ ಮಾತನಾಡಿದ ಶಾಸಕ ಮುನವಳ್ಳಿ, ರಾಮ ಆದರ್ಶ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲಾ ಧರ್ಮೀಯರಿಗೂ ಅನ್ವಯಿಸುತ್ತದೆ. ಭಾರತೀಯರ ಆತ್ಮಸಾಕ್ಷಿಯ ಪ್ರಜ್ಞೆ ರಾಮ. ಈ ಹಿನ್ನೆಲೆಯಲ್ಲಿ ಪ್ರಭುವಿನ ಮಂದಿರ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ನೆರವು ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮುಸ್ಲಿಂ ಯುವಕ ಮೊಹಮ್ಮದ್ ಚಾವೂಸ್ ಒಂದು ಸಾವಿರ ರೂ., ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ 11 ಸಾವಿರ ರೂ., ಸಿಬಿಎಸ್ ಬ್ಯಾಂಕ್​ನಿಂದ 51 ಸಾವಿರ ರೂ. ಮೊತ್ತದ ಹಣವನ್ನು ಚೆಕ್ ಮೂಲಕ ನಿಧಿ ಸಮರ್ಪಣಾ ಅಭಿಯಾನದ ಪ್ರಮುಖರಿಗೆ ನೀಡಲಾಯಿತು.

ABOUT THE AUTHOR

...view details