ಗಂಗಾವತಿ: ಪೂರ್ವನಿಯೋಜನೆಯಂತೆ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬಿಎಸ್ವೈ ಪುತ್ರ ಬಿ.ವೈ. ವಿಜಯೇಂದ್ರ ಭೇಟಿ ನೀಡದ ಕಾರಣ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಪೂಜೆ ಸಲ್ಲಿಸಿದ್ದಾರೆ.
ಅಂಜನಾದ್ರಿ ಬೆಟ್ಟಕ್ಕೆ ಬಾರದ ಸಿ ಎಂ ಬಿಎಸ್ವೈ ಪುತ್ರ: ಪದಾಧಿಕಾರಿಗಳಿಂದ ನೆರವೇರಿದ ಪೂಜೆ...! - B Y Vijayendra tested positive
ಸಿಎಂ ಬಿಎಸ್ವೈ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಹೋಂ ಐಸೋಲೆಷನ್ಗೆ ಒಳಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![ಅಂಜನಾದ್ರಿ ಬೆಟ್ಟಕ್ಕೆ ಬಾರದ ಸಿ ಎಂ ಬಿಎಸ್ವೈ ಪುತ್ರ: ಪದಾಧಿಕಾರಿಗಳಿಂದ ನೆರವೇರಿದ ಪೂಜೆ...! Gangavati Anjanadri special pooja](https://etvbharatimages.akamaized.net/etvbharat/prod-images/768-512-9047423-101-9047423-1601813575936.jpg)
ಅಂಜನಾದ್ರಿ ಬೆಟ್ಟದಲ್ಲಿ ಪೂಜೆ
ಪದಾಧಿಕಾರಿಗಳಿಂದ ನೆರವೇರಿದ ಪೂಜೆ
ತಾಲೂಕಿನ ಪವನಸುತನ ದರ್ಶನ ಪಡೆಯಲು ನಿರ್ಧರಿಸಿದ್ದ ಬಿ. ವೈ. ವಿಜಯೇಂದ್ರ ಪ್ರವಾಸದ ದಿನಾಂಕವನ್ನು ನಿಗದಿಗೊಳಿಸಿದ್ದರು. ಈ ಹಿನ್ನೆಲೆ ಬೆಟ್ಟದಲ್ಲಿ ದೇಗುಲದ ಆಡಳಿತ ಮಂಡಳಿ ಹಾಗೂ ಬಿಜಿಪಿ ಪಕ್ಷದ ಯುವ ಮೋರ್ಚಾದ ಪದಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ, ಈ ನಡುವೆ ವಿಜಯೇಂದ್ರ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಹೋಂ ಐಸೋಲೆಷನ್ಗೆ ಒಳಲಾಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.