ಕರ್ನಾಟಕ

karnataka

ETV Bharat / state

ಮಧ್ಯರಾತ್ರಿ ನಡಯುತ್ತಿದೆ ಬೆಚ್ಚಿಬೀಳಿಸುವ ವಿದ್ಯಮಾನ: ಗಂಗಾವತಿಯಲ್ಲಿ ರಾತ್ರಿಯಿಡೀ ಜನ ಜಾತ್ರೆ - ಕೊರೊನಾ ವೈರಸ್​

ದೇಶದಲ್ಲಿ ಲಾಕ್​ಡೌನ್​ ಜಾರಿಯಾಗಿದ್ದು ಸರ್ಕಾರ ಕಟ್ಟುನಿಟ್ಟಿನ ನಿಯಮಗಳಿಂದ ಜನ ಮನೆಯಿಂದ ಹೊರಗೆ ಬಾರದಂತೆ ಕಟ್ಟೆಚ್ಚರ ವಹಿಸಿದೆ. ಆದ್ರೆ ಗಂಗಾವತಿ ನಗರದಲ್ಲಿ ಮಾತ್ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಾರುಕಟ್ಟೆ ಪ್ರಾರಂಭವಾಗುತ್ತಿದ್ದು ಜನ ಜಾತ್ರೆ ಸೇರುತ್ತಿದೆ. ಹಲವು ದಿನಗಳಿಂದ ಈ ಘಟನೆ ನಡೆಯುತ್ತಿದ್ದರೂ ಸಹ ಪೊಲೀಸ್​ ಇಲಾಖೆಯ ಗಮನಕ್ಕೆ ಬಾರದೇ ಇರುವುದು ಹಲವು ಅನುಮಾನಗಳಿಗೆ ದಾರಿಮಾಡಿ ಕೊಟ್ಟಿದೆ.

gangavathi-people-broke-the-lock-down-rules
ಗಂಗಾವತಿಯಲ್ಲಿ ರಾತ್ರಿಯಿಡೀ ಜನ ಜಾತ್ರೆ

By

Published : Apr 16, 2020, 3:05 PM IST

ಗಂಗಾವತಿ: ನಗರದಲ್ಲಿ ಮಧ್ಯರಾತ್ರಿ ಎರಡು ಗಂಟೆಗೆ ಜನರು ಲಾಕ್​ಡೌನ್​ ಉಲ್ಲಂಘಿಸಿ ಬೀದಿಗೆ ಬರುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಪೊಲೀಸ್​ ಗಮನಿಸದೇ ಇರುವುದು ವಿಪರ್ಯಾಸವಾಗಿದೆ.

ಮಧ್ಯರಾತ್ರಿ ಎರಡು ಗಂಟೆಗೆ ತರಕಾರಿ, ಹಣ್ಣಿನ ಮಾರುಕಟ್ಟೆ ಆರಂಭವಾಗುತ್ತಿದ್ದು, ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇಲ್ಲಿನ ಮಹಾತ್ಮಗಾಂಧಿ ವೃತ್ತ, ಮಹಾವೀರ ಸರ್ಕಲ್ ನಲ್ಲಿರುವ ಬಹುತೇಕ ಬಟ್ಟೆ, ಫ್ಯಾನ್ಸಿಸ್ಟೋರ್, ಎಲೆಕ್ಟ್ರಿಕಲ್ ಅಂಗಡಿ ಆರಂಭವಾಗುತ್ತಿದೆ. ಬೆಳಗ್ಗೆ ಐದು ಗಂಟೆಗೆಲ್ಲ ವ್ಯಾಪಾರ ವಹಿವಾಟು ಬಂದಾಗುತ್ತಿರುವ ವಿಲಕ್ಷಣ ಲಾಕ್​ಡೌನ್​​ ಉಲ್ಲಂಘಿಸುತ್ತಿರುವ ಘಟನೆ ಜರುಗುತ್ತಿದೆ.

ಗಂಗಾವತಿಯಲ್ಲಿ ರಾತ್ರಿಯಿಡೀ ಜನ ಜಾತ್ರೆ

ಪೊಲೀಸರು ಬೆಳಗ್ಗೆ ಐದು ಗಂಟೆಯ ಬಳಿಕ ಕರ್ತವ್ಯಕ್ಕೆ ಬರುತ್ತಿದ್ದು, ಅಷ್ಟರೊಳಗಾಗಲೆ ಬಹುತೇಕ ಎಲ್ಲ ವಹಿವಾಟುಗಳನ್ನು ವರ್ತಕರು ಮುಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಇಲ್ಲ ಎಂಬ ಒಂದೇ ಕಾರಣಕ್ಕೆ ಜನ ಅನಾಗತ್ಯವಾಗಿ ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಕಳೆದ ಹಲವು ದಿನನಗಳಿಂದ ಅದೇಕೋ ಪೊಲೀಸರು ಕೂಡ ಜನರಿಗೆ ಕೊಂಚ ರಿಲಾಕ್ಸ್ ಕೊಟ್ಟಂತೆ ಕಾಣುತ್ತಿದೆ.

ABOUT THE AUTHOR

...view details