ಗಂಗಾವತಿ: ನಗರದ ಈದ್ಗಾ ಕಾಲೋನಿಯಲ್ಲಿರುವ ಈಶ್ವರ ಸಿಂಗ್ ಎಂಬುವರ ಕುಟುಂಬ ಲಾಕ್ಡೌನ್ನಿಂದ ಪರದಾಡುತ್ತಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಕ್ಷತ್ರಿಯ ಒಕ್ಕೂಟದ ಮುಖಂಡರು, ನೆರವಿನ ಹಸ್ತ ಚಾಚಿದ್ದಾರೆ.
ಈ ಬಗ್ಗೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾಗಿದ್ದನ್ನು ಗಮನಿಸಿದ ಕೆಲ ಯುವಕರು, ಸಮಾಜದ ಮುಖಂಡರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಪಂದಿಸಿದ ಸಮುದಾಯ ಮುಖಂಡರು, ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ನೆರವು ನೀಡಿದರು.