ಕರ್ನಾಟಕ

karnataka

ETV Bharat / state

ಮತಪತ್ರ ಹರಿದು ಉದ್ಧಟತನ: ವ್ಯಕ್ತಿ ವಿರುದ್ಧ ದೂರು ದಾಖಲು - ಗ್ರಾಮೀಣ ಪೊಲೀಸ್ ಠಾಣೆ ಗಂಗಾವತಿ

ಆನೆಗೊಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ 1ರಲ್ಲಿ ಮತಪತ್ರ ಹರಿದು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಿಮ್ಮಪ್ಪ ಕೃಷ್ಣಾರೆಡ್ಡಿ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ್ದು, ಆತನ ವಿರುದ್ಧ ಚುನಾವಣಾ ಅಧಿಕಾರಿ ರಾಘವೇಂದ್ರ ರೆಡ್ಡಿ ದೂರು ದಾಖಲಿಸಿದ್ದಾರೆ.

Gangavathi, a rural police station
ಗ್ರಾಮೀಣ ಪೊಲೀಸ್ ಠಾಣೆ ಗಂಗಾವತಿ

By

Published : Dec 28, 2020, 6:16 PM IST

ಗಂಗಾವತಿ (ಕೊಪ್ಪಳ):ಮತದಾನಕ್ಕೆಂದು ಆನೆಗೊಂದಿ ಮತ ಕೇಂದ್ರಕ್ಕೆ ಬಂದ ವ್ಯಕ್ತಿಯೊಬ್ಬ ಮತಪತ್ರ ಹರಿದು ಹಾಕಿದ ಘಟನೆ ಬೆನ್ನಲ್ಲೇ ಇಂತಹದ್ದೇ ಇನ್ನೊಂದು ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಆನೆಗೊಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ 1ರಲ್ಲಿ ಈ ಘಟನೆ ನಡೆದಿದ್ದು, ಇದೇ ಗ್ರಾಮದ ತಿಮ್ಮಪ್ಪ ಕೃಷ್ಣಾರೆಡ್ಡಿ ಎಂಬ ವ್ಯಕ್ತಿ ಮತಪತ್ರ ಹರಿದು ಹಾಕಿರುವುದಾಗಿ ಆರೋಪಿಸಿ ಚುನಾವಣಾ ಅಧಿಕಾರಿ ರಾಘವೇಂದ್ರ ರೆಡ್ಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾರ್ವಜನಿಕರು ಮತದಾನ ಮಾಡಿ ಹೋಗುತ್ತಿರುವ ಸಂದರ್ಭದಲ್ಲಿ ಮತಗಟ್ಟೆಗೆ ಬಂದ ತಿಮ್ಮಪ್ಪ (ಮತದಾರ ಕ್ರಮಸಂಖ್ಯೆ 628) ಮತಪತ್ರ ಪಡೆದುಕೊಂಡಿದ್ದಾನೆ. ಬಳಿಕ ಅದನ್ನು ಸಿಬ್ಬಂದಿ ಕಣ್ಣೆದುರೇ ಹರಿದು ಹಾಕಿದ್ದಾನೆ. ಈ ಬಗ್ಗೆ ಪ್ರಶ್ನಿಸಿದರೆ ಚುನಾವಣಾ ಕರ್ತವ್ಯನಿರತ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರು ದಾಖಲಿಸಲಾಗಿದೆ.

ಇದನ್ನೂ ಓದಿ:ಮತ ಎಣಿಕೆಗೆ ಇನ್ನೊಂದೇ ದಿನ ಬಾಕಿ... ಮತದಾರರ ಒಲವು ಯಾರತ್ತ..?

ABOUT THE AUTHOR

...view details