ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ, ಹೆಚ್​ಡಿಕೆಗೆ ಕಾಮನ್​ ಸೆನ್ಸ್​ ಇರಬೇಕಿತ್ತು: ಸಂಗಣ್ಣ ಕರಡಿ - incitement-to-riots-said-by-mp-sanganna

ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್​ಡಿಕೆ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಹೇಳಿಕೆ ನೀಡುವ ಮುನ್ನ ಕಾಮನ್​ ಸೆನ್ಸ್​ ಇರಬೇಕು ಎಂದು ಸಂಸದ ಕರಡಿ ಸಂಗಣ್ಣ ಆರೋಪಿಸಿದರು.

mp karadi sanganna
ಸಂಸದ ಕರಡಿ ಸಂಗಣ್ಣ

By

Published : Dec 24, 2019, 6:57 PM IST

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಮನ್​ ಸೆನ್ಸ್ ಇರಬೇಕಿತ್ತು. ಅವರಿಂದಲೇ ಗಲಭೆಗಳು ಹೆಚ್ಚಾಗುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಆರೋಪಿಸಿದ್ದಾರೆ.

ಸಂಸದ ಕರಡಿ ಸಂಗಣ್ಣ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರ ಗಲಭೆ ಪ್ರಕರಣವನ್ನು ಈ ಇಬ್ಬರು ನಾಯಕರು ಬಿಜೆಪಿ ಸರ್ಕಾರದ ಮೇಲೆ ಎತ್ತುಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಮಂಗಳೂರು ಗಲಭೆಗೆ ಯಾರು ಕಾರಣವೆಂಬುದಕ್ಕೆ ಇಂದು ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇಬ್ಬರು ನಾಯಕರಿಗೆ ತಾವು ಏನು ಮಾತಾಡುತ್ತೇವೆ ಎಂಬುದು ಗೊತ್ತಿರಬೇಕು ಎಂದು ಕಿಡಿಕಾರಿದರು.

ಇಂತಹ ನಾಯಕರಿಂದಲೇ ದೇಶ ದುಸ್ಥಿತಿಗೆ ಬಂದಿದೆ. ಜನತೆ ಹಾಗೂ ಕಾಯ್ದೆ ಬಗ್ಗೆ ಈ ನಾಯಕರಿಗೆ ಕಾಳಜಿ ಇಲ್ಲ. ನಾವು ಮುಸ್ಲಿಂ ಸಮಾಜದ ವಿರೋಧಿಗಳಲ್ಲ ಎಂದು ಕೇಂದ್ರ ಸರ್ಕಾರದ ಮಸೂದೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

ABOUT THE AUTHOR

...view details