ಕರ್ನಾಟಕ

karnataka

ETV Bharat / state

ಲಸಿಕೆ ಹಾಕಿಕೊಂಡ ಸಾರಿಗೆ ಸಿಬ್ಬಂದಿಗೆ ಮಾತ್ರ ಡ್ಯೂಟಿಗೆ ಅನುಮತಿ - Bus Traffic Commencement in Gangavathi

ಸರ್ಕಾರದ ಆದೇಶದ ಪ್ರಕಾರ, ಕೇವಲ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮುಖ್ಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಡ್ಯೂಟಿಗೆ ಅವಕಾಶ ನೀಡಲಾಗುವುದು ಎಂದು ಘಟಕ ವ್ಯವಸ್ಥಾಪಕ ಸಂಜೀವಮೂರ್ತಿ ತಿಳಿಸಿದರು.

govt bus
ಸರ್ಕಾರಿ ಬಸ್​ಗಳು

By

Published : Jun 20, 2021, 11:18 PM IST

ಗಂಗಾವತಿ: ಕಳೆದ ಎರಡು ತಿಂಗಳಿಂದ ರಸ್ತೆಗೆ ಇಳಿಯದ ಹಾಗೂ ಜನರಿಗೆ ಮುಖ ತೋರಿಸದಂತಾಗಿದ್ದ ಸಾರಿಗೆ ಇಲಾಖೆಯ ವಾಹನಗಳು ಸೋಮವಾರದಿಂದ ಮತ್ತೆ ಬೀದಿಗೆ ಇಳಿಯಲಿವೆ. ಇದಕ್ಕಾಗಿ ಇಲಾಖೆ ಇಲ್ಲಿನ ಘಟಕದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಘಟಕ ವ್ಯವಸ್ಥಾಪಕ ಸಂಜೀವಮೂರ್ತಿ ಮಾತನಾಡಿದರು.

ಸಾರಿಗೆ ಘಟಕದ ಕಚೇರಿಯಲ್ಲಿ ಸಿಬ್ಬಂದಿ ಸಭೆ ನಡೆಸಿದ ಘಟಕ ವ್ಯವಸ್ಥಾಪಕ ಸಂಜೀವಮೂರ್ತಿ, ಸೋಮವಾರದಿಂದ ಮತ್ತೆ ರಸ್ತೆಗೆ ಇಳಿಯಲಿರುವ ವಾಹನಗಳನ್ನು ಯಾವ ರಸ್ತೆ ಹಾಗೂ ಮಾರ್ಗದಲ್ಲಿ ಓಡಿಸಬೇಕು, ಎಷ್ಟು ಪ್ರಮಾಣದ ವಾಹನಗಳನ್ನು ಸಂಚಾರಕ್ಕೆ ಬಿಡಬೇಕು ಎಂಬುವುದರ ಬಗ್ಗೆ ಸಭೆ ನಡೆಸಿದರು. ನಂತರ ಈ ಬಗ್ಗೆ`ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶದ ಪ್ರಕಾರ, ಕೇವಲ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮುಖ್ಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಡ್ಯೂಟಿಗೆ ಅವಕಾಶ ನೀಡಲಾಗುವುದು ಎಂದರು.

ಓದಿ:ಸಿಎಂ ಭೇಟಿಯಾದ ಅವಧೂತ: 3ನೇ ಅಲೆ ಬಗ್ಗೆ ಎಚ್ಚರ ಎಂದ ವಿನಯ್​ ಗುರೂಜಿ

ABOUT THE AUTHOR

...view details