ಕರ್ನಾಟಕ

karnataka

ETV Bharat / state

ಕುಡಿಯುವ ನೀರಿನ ಪೈಪ್ ಸರಿಪಡಿಸುವಂತೆ ಕುಷ್ಟಗಿ ಜನರ ಮನವಿ - Kustagi latest news

ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದೆ. ಪರಿಣಾಮ, ಕುಡಿಯುವ ನೀರು ಚರಂಡಿ ನೀರು ಸೇರುತ್ತಿದ್ದು, ಅದನ್ನೇ ಜನರು ಬಳಸುವಂತಾಗಿದೆ.

ಕುಷ್ಟಗಿ ತಾಲೂಕು
ಕುಷ್ಟಗಿ ತಾಲೂಕು

By

Published : Aug 8, 2020, 2:57 PM IST

ಕುಷ್ಟಗಿ (ಕೊಪ್ಪಳ):ತಾಲೂಕಿನ ಹಿರೇನಂದಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದೆ. ಪರಿಣಾಮ, ಅಪಾರ ಪ್ರಮಾಣದ ನೀರು ಚರಂಡಿ ಸೇರುತ್ತಿದ್ದು ಕೂಡಲೇ ಸಂಬಂಧಪಟ್ಟವರು ಪೈಪ್ ಸರಿಪಡಿಸುವಂತೆ ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.

ಶುದ್ಧ ಕುಡಿಯುವ ನೀರು ಚರಂಡಿ ನೀರು ಜೊತೆ ಬೆರೆಯುತ್ತಿದ್ದು ಜನರು ಅದನ್ನೇ ದಿನಬಳಕೆಗೆ ಬಳಸುವಂತಾಗಿದೆ. ಇದರಿಂದ ಖಾಯಿಲೆ ಹರಡುವ ಭೀತಿ ಎದುರಾಗಿದೆ. ಸ್ಥಳೀಯ ಗ್ರಾ.ಪಂ.ಅಧಿಕಾರಿಗಳು ಇತ್ತ ಗಮನಹರಿಸಿ ಸರಿಪಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕೆಸರು ಮಯವಾದ ರಸ್ತೆಗಳು:

ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ರಸ್ತೆಗಳಲ್ಲಿ ನೀರು ನಿಂತಿದ್ದು ಕೆಸರು ಮಯವಾಗಿದೆ. ಇದರಲ್ಲಿಯೇ ಜನರು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

ABOUT THE AUTHOR

...view details