ಕೊಪ್ಪಳ: ಪಂಪಾಸರೋವರದಲ್ಲಿ ನಿಧಿಗಾಗಿ ದೇವಿ ಮೂರ್ತಿ ತೆರವುಗೊಳಿಸಿದ್ದಾರೆ ಎನ್ನುವುದೆಲ್ಲ ಶುದ್ಧ ಸುಳ್ಳು. ದೇವಿ ನನ್ನಿಂದ ಜೀರ್ಣೋದ್ಧಾರ ಕಾರ್ಯ ಮಾಡಿಸುತ್ತಿದ್ದಾಳೆ. ಈಗ ನಡೆದಿರುವ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಲಾಗುವುದು. ಯಾರೋ ಕೆಲವರು ಆರೋಪ ಮಾಡಿ ಗೊಂದಲ ಸೃಷ್ಟಿಯಾಗಿದೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದರು.
ಪಂಪಾಸರೋವರದಲ್ಲಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ದೇವರ ಮೂರ್ತಿಗಳನ್ನ ತೆರವುಗೊಳಿಸಿದ್ದು, ಇದೇ ಮೊದಲೇನಲ್ಲ. ಈ ಹಿಂದೆ ಹಂಪಿಯಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಂಡ ಸಂದರ್ಭದಲ್ಲಿ ಮೂರ್ತಿ ತೆಗೆಯಲಾಗಿತ್ತು ಎಂದರು.