ಕರ್ನಾಟಕ

karnataka

ETV Bharat / state

ಗಂಗಾವತಿ: ಧಾರಾಕಾರ ಮಳೆಗೆ ನೆಲಕ್ಕುರುಳಿದ ಭತ್ತದ ಫಸಲು - ಗಂಗಾವತಿ ತಾಲೂಕು ಮಲ್ಲಾಪುರ ಗ್ರಾಮ

ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮಲ್ಲಾಪುರ ಗ್ರಾಮದ ಹೊರವಲಯದಲ್ಲಿ ಬೆಳೆಯಲಾಗಿದ್ದ ನೂರಾರು ಎಕರೆ ಭತ್ತದ ಫಸಲು ನೆಲಕ್ಕುರುಳಿದ್ದು, ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಂದ ಬೆಳೆಹಾನಿಯ ಮಾಹಿತಿ ಸಂಗ್ರಹಿಸಿದ್ದಾರೆ.

Destroy the paddy crop to container rain
ಗಂಗಾವತಿ: ಧಾರಾಕಾರ ಮಳೆಗೆ ನೆಲಕ್ಕುರುಳಿದ ಭತ್ತದ ಫಸಲು

By

Published : Sep 10, 2020, 7:00 PM IST

ಗಂಗಾವತಿ(ಕೊಪ್ಪಳ):ತಾಲೂಕಿನ ಆನೆಗೊಂದಿ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಬೆಳೆಯಲಾಗಿದ್ದ ನೂರಾರು ಎಕರೆ ಭತ್ತದ ಫಸಲು ನೆಲಕ್ಕುರುಳಿದೆ.

ಗಂಗಾವತಿ: ಧಾರಾಕಾರ ಮಳೆಗೆ ನೆಲಕ್ಕುರುಳಿದ ಭತ್ತದ ಫಸಲು

ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೂ ಸುರಿದ ನಿರಂತರ ಮಳೆಯಿಂದಾಗಿ ಎಡದಂಡೆ ನಾಲೆಯ ಸಮೀಪ ಬೋರ್​ವೆಲ್​ ಮೂಲಕ ಬೆಳೆಯಲಾಗಿದ್ದ ನೂರಾರು ಎಕರೆ ಭತ್ತದ ಫಸಲು ನೆಲಕ್ಕುರುಳಿದೆ. ಪರಿಣಾಮ ಈಗಷ್ಟೇ ತೆನೆ ಕಟ್ಟುತ್ತಿದ್ದ ಬೆಳೆಯಲ್ಲಿ ಇಳುವರಿ ಕುಂಟಿತವಾಗುವ ಆತಂಕ ಎದುರಾಗಿದೆ.

ಸ್ಥಳಕ್ಕಾಮಿಸಿದ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ರೈತರಿಂದ ಬೆಳೆಹಾನಿಯ ಮಾಹಿತಿ ಸಂಗ್ರಹಿಸಿದ್ದಾರೆ.

ABOUT THE AUTHOR

...view details