ಕುಷ್ಟಗಿ(ಕೊಪ್ಪಳ): ಪಟ್ಟಣದ ಹೊರವಲಯದಲ್ಲಿರುವ ಚಿಯೋನ್ ನಗರದ ಆತ್ಮಭರಿತ ಎ.ಜೆ.ಸಭಾಲಯ ಚರ್ಚ್ನಲ್ಲಿ ಕ್ರಿಸಮಸ್ ಹಬ್ಬವನ್ನು ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಲಾಯಿತು.
ಕೊರೊನಾ ಹಿನ್ನೆಲೆ ಕುಷ್ಟಗಿಯಲ್ಲಿ ಸರಳ ಕ್ರಿಸ್ಮಸ್ ಆಚರಣೆ - Corona Background Simple Christmas
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕುಷ್ಟಗಿಯ ಆತ್ಮಭರಿತ ಎ.ಜೆ.ಸಭಾಲಯ ಚರ್ಚ್ನಲ್ಲಿ ಕ್ರಿಸಮಸ್ ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸುವ ಸಂಭ್ರಮದಲ್ಲಿ ಪಾಲ್ಗೊಂಡರು. ಕೊರೊನಾ ಹಿನ್ನೆಲೆ ಹಬ್ಬವನ್ನು ಸರಳವಾಗಿ ಆಚರಿಲಾಯಿತು.

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕ್ರಿಸಮಸ್ ಪ್ರಯುಕ್ತ ಕೇಕ್ ಕತ್ತರಿಸುವ ಸಂಭ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕೊರೊನಾ ವ್ಯಾಪಿಸಿದ ಸಂದರ್ಭದಲ್ಲಿ ಜನರು ಬಾಳಿ ಬದುಕಬೇಕು. ಹಾಗಾಗಿ ಸರ್ಕಾರದ ಕೋವಿಡ್ ನೀತಿ-ನಿಯಮಗಳನ್ನು ಪಾಲಿಸಿ ಸರಳವಾಗಿ ಹಬ್ಬ ಆಚರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ್, ಕುಷ್ಟಗಿ ಪಿಎಸ್ಐ ತಿಮ್ಮಣ್ಣ ನಾಯಕ್, ಸಭಾಪಾಲಕ ಎಸ್.ಕೆ.ಜೋಸ್, ಪುರಸಭೆ ಸದಸ್ಯ ಸಯ್ಯದ್ ಮೈನುದ್ದೀನ್ ಮುಲ್ಲಾ ಮತ್ತಿತರರಿದ್ದರು. ಕುಷ್ಟಗಿ ಕ್ರಿಸ್ತರಾಜ ದೇವಾಲಯ, ಅನ್ನದಾನೇಶ್ವರ ನಗರದ ಚರ್ಚನಲ್ಲಿಯೂ ಸರಳವಾಗಿ ಕ್ರಿಸ್ಮಸ್ ಆಚರಿಸಲಾಯಿತು.