ಕರ್ನಾಟಕ

karnataka

ಗಂಗಾವತಿಯ 'ಕೈ' ನಾಯಕರಿಗೆ ಮಸ್ಕಿ ಚುನಾವಣೆಯ ಜವಾಬ್ದಾರಿ

By

Published : Apr 2, 2021, 2:13 PM IST

ಹಾಲಿ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿಗೆ ಬಳಗಾನೂರು, ಮಾಜಿ ಸಂಸದ ಶಿವರಾಮಗೌಡರಿಗೆ ಗುಡುದೂರು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಉಮಲೂಟಿ, ಕೆಪಿಸಿಸಿಯ ಎಸ್ಟಿ ಘಟಕ ರಾಜ್ಯ ಉಪಾಧ್ಯಕ್ಷ ರಾಜು ನಾಯಕ್​​ಗೆ ಗುಂಡಾ ಗ್ರಾಮಗಳ ಉಸ್ತುವಾರಿಗೆ ನಿಯೋಜಿಸಲಾಗಿದೆ..

congress new startergey for  maski loksabha election
ಕೈ ನಾಯಕರಿಗೆ ಮಸ್ಕಿ ಚುನಾವಣೆಯ ಜವಾಬ್ದಾರಿ

ಗಂಗಾವತಿ :ರಾಜ್ಯ ರಾಜಕಾರಣದ ಗಮನ ಸೆಳೆದಿರುವ ಮಸ್ಕಿ ವಿಧಾನಸಭಾ ಚುನಾವಣೆ ಬಿಜೆಪಿ-ಕಾಂಗ್ರೆಸ್ ಮಧ್ಯೆ ಟಫ್ ವಾರ್‌ನಂತಾಗಿದೆ. ಇದೀಗ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ವಿಭಿನ್ನ ತಂತ್ರದ ಮೊರೆ ಹೋಗಿದೆ.

ಇದರ ಭಾಗವಾಗಿ ಗಂಗಾವತಿ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದ ನಾಯಕರನ್ನು ಚುನಾವಣಾ ಪ್ರಚಾರದ ಉಸ್ತುವಾರಿಯನ್ನಾಗಿ ಮಸ್ಕಿ ಕ್ಷೇತ್ರದ ನಾನಾ ಗ್ರಾಮಗಳಿಗೆ ನಿಯೋಜಿಸಲಾಗಿದೆ. ಈ ಪೈಕಿ ಡಿಸಿಸಿ ಹಾಲಿ ಅಧ್ಯಕ್ಷ, ಮಾಜಿ ಸಚಿವರು, ಮಾಜಿ ಸಂಸದರೂ ಸೇರಿದ್ದಾರೆ.

ಹಾಲಿ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿಗೆ ಬಳಗಾನೂರು, ಮಾಜಿ ಸಂಸದ ಶಿವರಾಮಗೌಡರಿಗೆ ಗುಡುದೂರು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಉಮಲೂಟಿ, ಕೆಪಿಸಿಸಿಯ ಎಸ್ಟಿ ಘಟಕ ರಾಜ್ಯ ಉಪಾಧ್ಯಕ್ಷ ರಾಜು ನಾಯಕ್​​ಗೆ ಗುಂಡಾ ಗ್ರಾಮಗಳ ಉಸ್ತುವಾರಿಗೆ ನಿಯೋಜಿಸಲಾಗಿದೆ.

ABOUT THE AUTHOR

...view details