ಕರ್ನಾಟಕ

karnataka

ETV Bharat / state

ಆರ್​​​ಟಿಇ ತಿದ್ದುಪಡಿ ವಾಪಸ್ ಪಡೆಯಲು ಮಕ್ಕಳ ಮತ್ತು ಪಾಲಕರ ಒಕ್ಕೂಟ ಆಗ್ರಹ - rte students and parents associatiun

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ಕೂಡಲೇ ಆ ಕ್ರಮದಿಂದ ಹಿಂದಕ್ಕೆ ಸರಿಯಬೇಕು ಎಂದು ಆರ್​​ಟಿಇ ವಿದ್ಯಾರ್ಥಿ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.

ggvt

By

Published : Nov 24, 2019, 3:44 AM IST

ಗಂಗಾವತಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್​ಟಿಇ) ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ಕೂಡಲೇ ಆ ಕ್ರಮದಿಂದ ಹಿಂದಕ್ಕೆ ಸರಿಯಬೇಕು ಎಂದು ಆರ್​ಟಿಇ ವಿದ್ಯಾರ್ಥಿ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್​ಟಿಇ ಸಲಹೆಗಾರ ಚಂದ್ರಕಾಂತ್ ಬಂಡಾರಿ, ನಮ್ಮ ಉದ್ದೇಶ ಪಾಲಕರನ್ನು ಜಾಗೃತಗೊಳಿಸುವುದು ಮತ್ತು ಸ್ಥಗಿತವಾಗಿರುವ ಆರ್​ಟಿಇ ಪ್ರವೇಶವನ್ನು ಮತ್ತೆ ಮುಂದುವರೆಸುವಂತೆ ಹೋರಾಟ ಮಾಡುವುದು ಎಂದರು.

ಆರ್ಟಿಇ ಸಲಹೆಗಾರ ಚಂದ್ರಕಾಂತ್ ಬಂಢಾರಿ

ಈ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಈ ಯೋಜನೆಯಿಂದ ಬಡ ಮಕ್ಕಳು, ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲವಾಗುತ್ತದೆ. ಯಾವುದೇ ಖಾಸಗಿ ಶಾಲೆಯಲ್ಲಿ ಶೇ.25ರಷ್ಟು ಸೀಟು ಮೀಸಲು ಮಾಡುವಂತೆ ನಮ್ಮ ಹೋರಾಟ ಇದೆ ಎಂದರು.

ABOUT THE AUTHOR

...view details