ಕರ್ನಾಟಕ

karnataka

By

Published : Aug 31, 2020, 1:28 PM IST

ETV Bharat / state

ಗಂಗಾವತಿ: ಬಾಲ್ಯ ವಿವಾಹ.. ಒಂದೂವರೆ ವರ್ಷದ ಬಳಿಕ ಬೆಳಕಿಗೆ

2019ರ ಮೇ ತಿಂಗಳ 19ರಂದು ತಾಲೂಕಿನ ವಡ್ಡರಹಟ್ಟಿಯ ಗದ್ವಾಲ್ ಕ್ಯಾಂಪಿನ ಚರ್ಚನಲ್ಲಿ ಈ ಮದುವೆ ನಡೆದಿತ್ತು.

ಬಾಲ್ಯ ವಿವಾಹ
ಬಾಲ್ಯ ವಿವಾಹ

ಗಂಗಾವತಿ:ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯಿತಿಯ ಗದ್ವಾಲ್ ಕ್ಯಾಂಪಿನ ಚರ್ಚನಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ನಡೆದಿರುವ ವಿವಾಹ ಇದೀಗ ಬಾಲ್ಯ ವಿವಾಹದ ಸ್ವರೂಪ ಪಡೆದುಕೊಂಡು ಬೆಳಕಿಗೆ ಬಂದಿರುವುದು ಆಸಕ್ತಿಗೆ ಕಾರಣವಾಗಿದೆ.

ಈ ಘಟನೆ ನಡೆದು ಒಂದೂವರೆ ವರ್ಷವಾಗಿದ್ದು, ಇದೀಗ ಇಲಾಖೆಯ ಗಮನಕ್ಕೆ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. 2019ರ ಮೇ ತಿಂಗಳ 19ರಂದು ತಾಲೂಕಿನ ವಡ್ಡರಹಟ್ಟಿಯ ಗದ್ವಾಲ್ ಕ್ಯಾಂಪಿನ ಚರ್ಚನಲ್ಲಿ ಈ ಮದುವೆ ನಡೆದಿತ್ತು.

ಆದರೆ ಸ್ಥಳೀಯರು ನೀಡಿದ ದೂರಿನ ಹಿನ್ನೆಲೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಬಾಲಕಿ ಇನ್ನೂ ಅಪ್ರಾಪ್ತಳಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಅಪ್ರಾಪ್ತೆಯನ್ನು ಮದುವೆ ಮಾಡಿಕೊಟ್ಟ ದಾಖಲೆಗಳು ಸಿಕ್ಕಿವೆ.

ಕೂಡಲೆ ಬಾಲಕಿಯನ್ನು ವಶಕ್ಕೆ ಪಡೆದ ಇಲಾಖೆಯ ಅಧಿಕಾರಿಗಳು, ತಜ್ಞರ ಮೂಲಕ ಆಪ್ತಸಮಾಲೋಚನೆ ಮಾಡಿಸಿದಾಗ ಬಾಲಕಿಯಿಂದ ಬಾಲ್ಯ ವಿವಾಹದ ಮಾಹಿತಿ ಹೊರ ಬಿದ್ದಿದೆ. ಇದೀಗ ಪಾಲಕರ ಮೇಲೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯ ದೂರು ದಾಖಲಿಸಲಾಗಿದೆ.

ABOUT THE AUTHOR

...view details