ಕರ್ನಾಟಕ

karnataka

By

Published : Apr 24, 2020, 7:59 AM IST

ETV Bharat / state

ಲಾಕ್​​ಡೌನ್ ತಂದ ಸಂಕಷ್ಟ: ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರ ಪರಿಹಾರ ಹಣ

ಕುಷ್ಟಗಿಯ ಬೀದಿ ಬದಿ ವ್ಯಾಪಾರಿಗಳು ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿದ್ದು, ಇವರಿಗೆ ಪರಿಹಾರ ಕೊಡಿಸಲು ಕುಷ್ಟಗಿ ಪೌರಾಡಳಿತ ಮುಂದಾಗಿದೆ.

can govt gives relief fund for road side shoppers
ಲಾಕ್​​ಡೌನ್​​ ಟೈಮ್​​​ : ಬೀದಿ ಬದಿ ವ್ಯಾಪಾರಸ್ಥರಿಗೆ ಸಿಗುತ್ತಾ ಪರಿಹಾರ?

ಕುಷ್ಟಗಿ (ಕೊಪ್ಪಳ: ಲಾಕ್​ಡೌನ್​​ನಿಂದಾಗಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಪರಿಹಾರ ಹಣ ಜಮಾ ಮಾಡಲಿದೆ.

ಕುಷ್ಟಗಿ ಪಟ್ಟಣದಲ್ಲಿ ನೋಂದಾಯಿತ 350 ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಲಾಕ್​ಡೌನ್​ ಪರಿಸ್ಥಿತಿಯಲ್ಲಿ ದೈನಂದಿನ ವ್ಯಾಪಾರ ಸ್ಥಗಿತಗೊಂಡಿದ್ದು, ದಿನದ ಊಟ ಹಾಗೂ ಕೌಟುಂಬಿಕ ನಿರ್ವಹಣೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಅವರ ವಿವರಗಳನ್ನು ಸಂಗ್ರಹಿಸಿದೆ.

ಈ ಬಗ್ಗೆ ಪೌರಾಡಳಿತ ನಿರ್ದೇಶನಾಲಯ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಮಾಹಿತಿ ನೀಡಿದರು.

ABOUT THE AUTHOR

...view details