ಕುಷ್ಟಗಿ (ಕೊಪ್ಪಳ: ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಪರಿಹಾರ ಹಣ ಜಮಾ ಮಾಡಲಿದೆ.
ಲಾಕ್ಡೌನ್ ತಂದ ಸಂಕಷ್ಟ: ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರ ಪರಿಹಾರ ಹಣ - ಲಾಕ್ಡೌನ್ ಟೈಮ್
ಕುಷ್ಟಗಿಯ ಬೀದಿ ಬದಿ ವ್ಯಾಪಾರಿಗಳು ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿದ್ದು, ಇವರಿಗೆ ಪರಿಹಾರ ಕೊಡಿಸಲು ಕುಷ್ಟಗಿ ಪೌರಾಡಳಿತ ಮುಂದಾಗಿದೆ.
ಲಾಕ್ಡೌನ್ ಟೈಮ್ : ಬೀದಿ ಬದಿ ವ್ಯಾಪಾರಸ್ಥರಿಗೆ ಸಿಗುತ್ತಾ ಪರಿಹಾರ?
ಕುಷ್ಟಗಿ ಪಟ್ಟಣದಲ್ಲಿ ನೋಂದಾಯಿತ 350 ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಲಾಕ್ಡೌನ್ ಪರಿಸ್ಥಿತಿಯಲ್ಲಿ ದೈನಂದಿನ ವ್ಯಾಪಾರ ಸ್ಥಗಿತಗೊಂಡಿದ್ದು, ದಿನದ ಊಟ ಹಾಗೂ ಕೌಟುಂಬಿಕ ನಿರ್ವಹಣೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಅವರ ವಿವರಗಳನ್ನು ಸಂಗ್ರಹಿಸಿದೆ.
ಈ ಬಗ್ಗೆ ಪೌರಾಡಳಿತ ನಿರ್ದೇಶನಾಲಯ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಮಾಹಿತಿ ನೀಡಿದರು.