ಕರ್ನಾಟಕ

karnataka

By

Published : Aug 3, 2022, 5:34 PM IST

ETV Bharat / state

ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್​ಗೆ ಸೋಲು ಖಚಿತ : ಸಚಿವ ಸಿ.ಸಿ ಪಾಟೀಲ್

ರಾಜ್ಯದಲ್ಲಿ ಕಾಂಗ್ರೆಸ್ ಉತ್ಸವನಾದ್ರೂ ಮಾಡಿಕೊಳ್ಳಲಿ, ಸಿದ್ದರಾಮಯ್ಯ ಅಮೃತಮಹೋತ್ಸವವಾದರೂ ಮಾಡಕೊಳ್ಳಲಿ, ಶಿವಕುಮಾರ್ ಉತ್ಸವನಾದ್ರು ಮಾಡಕೊಳ್ಳಲಿ ಅಥವಾ ಪರಮೇಶ್ವರ ಉತ್ಸಾವನಾದ್ರೂ ಮಾಡಿಕೊಳ್ಳಲಿ. ಇದರಿಂದ ಬಿಜೆಪಿಗೆ ಯಾವ ನಷ್ಟವೂ ಇಲ್ಲ ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದರು.

c-c-patil
ಸಚಿವ ಸಿ.ಸಿ ಪಾಟೀಲ್

ಕೊಪ್ಪಳ : ಕಾಂಗ್ರೆಸ್​ ವರಿಷ್ಠ ರಾಹುಲ್ ಗಾಂಧಿ ಈಗ ರಾಜ್ಯಕ್ಕೆ ಬಂದಿರುವುದು ನಮಗೆ ಬಹಳ ಖುಷಿಯಾಗಿದೆ. ಯಾಕಂದ್ರೆ, ರಾಹುಲ್ ಗಾಂಧಿ ಎಲ್ಲಿ ಹೋಗ್ತಾರೋ ಅಲ್ಲಿ ಕಾಂಗ್ರೆಸ್ ಸೋಲು ಖಚಿತ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ವ್ಯಂಗ್ಯವಾಡಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಉತ್ಸವನಾದ್ರೂ ಮಾಡಿಕೊಳ್ಳಲಿ, ಸಿದ್ದರಾಮಯ್ಯ ಅಮೃತಮಹೋತ್ಸವವಾದರೂ ಮಾಡಕೊಳ್ಳಲಿ, ಶಿವಕುಮಾರ್ ಉತ್ಸವನಾದ್ರು ಮಾಡಕೊಳ್ಳಲಿ ಅಥವಾ ಪರಮೇಶ್ವರ ಉತ್ಸಾವನಾದ್ರೂ ಮಾಡಿಕೊಳ್ಳಲಿ. ಇದರಿಂದ ಬಿಜೆಪಿಗೆ ಯಾವ ನಷ್ಟವೂ ಇಲ್ಲ. 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ನೂರಕ್ಕೆ ನೂರರಷ್ಟು ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಭವಿಷ್ಯ ನುಡಿದರು.

ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್​ಗೆ ಸೋಲು ಖಚಿತ-ಸಿ ಸಿ ಪಾಟೀಲ್

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಯೋಜನೆಗಳ ಅನುಷ್ಠಾನದ ಕುರಿತು ಸಭೆ ಮಾಡಿದ್ದೇನೆ.‌ ಮುಖ್ಯಮಂತ್ರಿಗಳು ಶಾಸಕರಿಗೆ ನೀಡಿದ ಅನುದಾನದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 120 ಕೋಟಿ ರುಪಾಯಿ ಯೋಜನೆಯನ್ನು ಪಿಡಬ್ಲೂಡಿಗೆ ನೀಡಲಾಗಿದೆ. 2022 ಅಂತ್ಯದಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂಜನಾದ್ರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಹಿಟ್ನಾಳ್ ಗ್ರಾಮದಿಂದ ಗಂಗಾವತಿಯವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 400 ಕೋಟಿ ರೂ. ಪ್ರಸ್ತಾವನೆ ಇದೆ. ಈಗ 130 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ :ಭಟ್ಕಳಕ್ಕೆ ಸಿಎಂ ಬೊಮ್ಮಾಯಿ ತುರ್ತು ಭೇಟಿ: ಮಳೆಹಾನಿ ಕುರಿತು ಅವಲೋಕನ

ABOUT THE AUTHOR

...view details