ಕರ್ನಾಟಕ

karnataka

By

Published : Oct 12, 2019, 8:44 AM IST

ETV Bharat / state

ಸಾರಿಗೆ ಸಂಸ್ಥೆ ಬಸ್​ ಪಲ್ಟಿ : 15ಕ್ಕೂ ಹೆಚ್ಚು ಜನರಿಗೆ ಗಾಯ

ಯಾದಗಿರಿಯಿಂದ ಧಾರವಾಡ ಕಡೆಗೆ ಹೊರಟಿದ್ದ ಕೆ.ಎ. 33, ಎಫ್ 0403 ನಂಬರಿನ ಸಾರಿಗೆ ಸಂಸ್ಥೆಯ ಬಸ್ ನರೇಗಲ್ - ಗಜೇಂದ್ರಗಡ ಮಾರ್ಗ ಮಧ್ಯೆ ಪಲ್ಟಿಯಾಗಿದ್ದು, 15ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬಸ್​ ಪಲ್ಟಿ

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರಿಗೆ ಸಂಸ್ಥೆಯ ಬಸ್​ವೊಂದು ಪಲ್ಟಿಯಾಗಿ ಸುಮಾರು 15ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಪಲ್ಟಿಯಾಗಿರುವ ರಾಜಹಂಸ ಬಸ್​

ಯಾದಗಿರಿಯಿಂದ ಧಾರವಾಡ ಕಡೆಗೆ ಹೊರಟಿದ್ದ ಕೆ.ಎ. 33, ಎಫ್ 0403 ನಂಬರಿನ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ನರೇಗಲ್ - ಗಜೇಂದ್ರಗಡ ಮಾರ್ಗ ಮಧ್ಯದ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಲ್ಟಿಯಾಗಿದೆ.

ಘಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಗದಗ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್​ಗೆ ರವಾನಿಸಲಾಗಿದೆ. ಚಾಲಕನ ಅಜಾಗರೂಕತೆಯೋ ಅಥವಾ ನಿದ್ದೆ ಮಂಪರಿನಿಂದ ಈ ಘಟನೆಗೆ ನಡೆದಿದೆಯೋ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ABOUT THE AUTHOR

...view details