ಕುಷ್ಟಗಿ(ಕೊಪ್ಪಳ): ತಾವರಗೇರಾ ಹೊರವಲಯದಲ್ಲಿ ಮತ್ತೊಮ್ಮೆ ಕರಡಿ ಭೀತಿ ಶುರುವಾಗಿದೆ.
ತಾವರಗೇರಾದಲ್ಲಿ ಕರಡಿ ಭೀತಿ: ಅರಣ್ಯ ಇಲಾಖೆಯಿಂದ ಕ್ರಮ - ಕೊಪ್ಪಳ ಇತ್ತೀಚಿನ ಸುದ್ದಿ
ಕುಷ್ಟಗಿ ತಾಲೂಕಿನ ತಾವರಗೇರಾ ಹೊರವಲಯದಲ್ಲಿ ಮತ್ತೆ ಕರಡಿ ಭೀತಿ ಶುರುವಾಗಿದ್ದು, ರೈತ ಅಮರೇಶ ಎಂಬವರ ತೋಟದಲ್ಲಿ ಕಲ್ಲಂಗಡಿ ಬೆಳೆಯನ್ನು ಹಾಳು ಮಾಡಿದೆ.
![ತಾವರಗೇರಾದಲ್ಲಿ ಕರಡಿ ಭೀತಿ: ಅರಣ್ಯ ಇಲಾಖೆಯಿಂದ ಕ್ರಮ Tavaregera](https://etvbharatimages.akamaized.net/etvbharat/prod-images/768-512-10672457-808-10672457-1613621788026.jpg)
ಅರಣ್ಯ ಇಲಾಖೆಯಿಂದ ಕ್ರಮ
ರೈತ ಅಮರೇಶ ಎಂಬವರ ತೋಟದಲ್ಲಿ ಕಲ್ಲಂಗಡಿ ಬೆಳೆಯನ್ನು ಹಾಳು ಮಾಡಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಕರಡಿ ಸಂಚಾರದ ಪ್ರದೇಶವನ್ನು ಗುರುತಿಸಿ ಕರಡಿ ಬಲೆ ಇಡಲಾಗಿದೆ.
ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗಣಿ ಈ ಬಗ್ಗೆ ಮಾತನಾಡಿದ್ದು, " ಈ ಪ್ರದೇಶದಲ್ಲಿ ಒಂದು ಕರಡಿ ಇದೆ. ರೈತರೊಬ್ಬರ ಕಲ್ಲಂಗಡಿ ಬೆಳೆ ಹಾಳು ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಕರಡಿ ಬಲೆ ಹಾಕಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.