ಕುಷ್ಟಗಿ (ಕೊಪ್ಪಳ) :ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಈ ಬಾರಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸೋಣ ಎಂದು ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್ಐ ಚಿತ್ತರಂಜನ್ ನಾಯಕ್ ತಿಳಿಸಿದ್ದಾರೆ.
ಬಕ್ರೀದ್ ಹಬ್ಬ ಹಿನ್ನೆಲೆ.. ಕುಷ್ಟಗಿಯಲ್ಲಿ ಶಾಂತಿ ಪಾಲನಾ ಸಭೆ - Koppal News
ಅಗಸ್ಟ್ 1ರಂದು ಬಕ್ರೀದ್ ಹಬ್ಬ ಹಿನ್ನೆಲೆ ಕುಷ್ಟಗಿ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿ ಪಾಲನಾ ಸಭೆ ನಡೆಸಲಾಯಿತು.
![ಬಕ್ರೀದ್ ಹಬ್ಬ ಹಿನ್ನೆಲೆ.. ಕುಷ್ಟಗಿಯಲ್ಲಿ ಶಾಂತಿ ಪಾಲನಾ ಸಭೆ Bakreid festival background: Peace keeping Meeting In kushtagi](https://etvbharatimages.akamaized.net/etvbharat/prod-images/768-512-8103564-827-8103564-1595254473176.jpg)
ಬಕ್ರೀದ್ ಹಬ್ಬ ಹಿನ್ನೆಲೆ: ಕುಷ್ಟಗಿಯಲ್ಲಿ ಶಾಂತಿ ಪಾಲನಾ ಸಭೆ
ಬಕ್ರೀದ್ ಹಬ್ಬ ಹಿನ್ನೆಲೆ.. ಕುಷ್ಟಗಿಯಲ್ಲಿ ಶಾಂತಿ ಪಾಲನಾ ಸಭೆ
ಅಗಸ್ಟ್ 1ರಂದು ಬಕ್ರೀದ್ ಹಬ್ಬ ಹಿನ್ನೆಲೆ ಕುಷ್ಟಗಿ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು. ನಮ್ಮವರೊಬ್ಬರು ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿದ್ದಾಗ ಯಾರಿಗೆ ಸಮಾಧಾನವಿರುತ್ತದೆ. ಇಂತಹ ಸಂದರ್ಭದಲ್ಲಿ ಅದ್ದೂರಿಯಾಗಿ ಹಬ್ಬ ಆಚರಿಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಈ ಬಾರಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸೋಣ.
ಬಕ್ರೀದ್ ವೇಳೆ ಇತರರಿಗೆ ಕಿರಿಕಿರಿಯಾಗದಂತೆ ನಿಗಾವಹಿಸಿ. ಇದಕ್ಕೆ ಪೊಲೀಸರ ಸಹಕಾರ ಯಾವತ್ತಿಗೂ ಇರುತ್ತದೆ ಎಂದರು.