ಕರ್ನಾಟಕ

karnataka

By

Published : Jul 13, 2022, 2:52 PM IST

ETV Bharat / state

ಗವಿಮಠ ವಿದ್ಯಾರ್ಥಿ ನಿಲಯಕ್ಕೆ 1.8 ಕೋಟಿ ದೇಣಿಗೆ ನೀಡಿದ ಆನಂದ್​​ ಸಿಂಗ್ ಕುಟುಂಬ

ಗವಿಮಠದ ಹಾಸ್ಟೆಲ್ ನಿರ್ಮಾಣಕ್ಕೆ 1.8 ಕೋಟಿ ದೇಣಿಗೆಯನ್ನು ಸಚಿವ ಆನಂದ್​ ಸಿಂಗ್ ಕುಟುಂಬ ನೀಡಿದೆ.

Anand Singh family donated 1.8 crores to Gavi Math Student Hostel
ಗವಿಮಠ ವಿದ್ಯಾರ್ಥಿ ನಿಲಯಕ್ಕೆ 1.8 ಕೋಟಿ ದೇಣಿಗೆ ನೀಡಿದ ಆನಂದ್​​ ಸಿಂಗ್ ಕುಟುಂಬ

ಕೊಪ್ಪಳ: ಗವಿಮಠದಿಂದ ನಿರ್ಮಾಣವಾಗಲಿರುವ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ 1 ಕೋಟಿ 8 ಲಕ್ಷ ರೂಪಾಯಿಗಳ ದೇಣಿಗೆಯನ್ನು ಸಚಿವ ಆನಂದ್​ ಸಿಂಗ್ ಕುಟುಂಬ ನೀಡಿದೆ.

ಕಳೆದ ಜೂನ್ 23ರಂದು ಗವಿಮಠದ ಆವರಣದಲ್ಲಿ ನಡೆದಿದ್ದ ಹಾಸ್ಟೆಲ್ ನಿರ್ಮಾಣ ಭೂಮಿ ಪೂಜೆ ಸಂದರ್ಭದಲ್ಲಿ 1.8 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಸಚಿವ ಆನಂದ್ ಸಿಂಗ್ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ 1.8 ಕೋಟಿ ರೂಪಾಯಿ ಚೆಕ್ ಅನ್ನು ಗುರುಪೂರ್ಣಿಮೆ ದಿನದಂದು ಗವಿಮಠಕ್ಕೆ ಆನಂದ್ ಸಿಂಗ್ ಮಗ ಸಿದ್ಧಾರ್ಥ್ ಸಿಂಗ್ ಕುಟುಂಬ ಸಮೇತರಾಗಿ ಆಗಮಿಸಿ ಹಸ್ತಾಂತರಿಸಿದರು.

ಗವಿಮಠ ವಿದ್ಯಾರ್ಥಿ ನಿಲಯಕ್ಕೆ 1.8 ಕೋಟಿ ದೇಣಿಗೆ ನೀಡಿದ ಆನಂದ್​​ ಸಿಂಗ್ ಕುಟುಂಬ

ಭೂಮಿ ಪೂಜೆ ಸಂದರ್ಭದಲ್ಲಿ ಗವಿಮಠದ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದರು. ಇದೀಗ ಆನಂದ್ ಸಿಂಗ್ ಸೇರಿದಂತೆ ಅನೇಕರು ದೇಣಿಗೆ ನೀಡುತ್ತಿದ್ದಾರೆ.

ಇದನ್ನೂ ಓದಿ:ನಾಳೆಯಿಂದ 2 ದಿನ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನ

ABOUT THE AUTHOR

...view details