ಕರ್ನಾಟಕ

karnataka

By

Published : Sep 21, 2019, 7:42 AM IST

ETV Bharat / state

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಜೆಸ್ಕಾಂ ಎಇಇ..

ನಗರದಲ್ಲಿರುವ ಜೆಸ್ಕಾಂನ ಅಧಿಕಾರಿ ವ್ಯಕ್ತಿಯೋರ್ವರಿಂದ ಟಿಸಿ ಅಳವಡಿಕೆಗಾಗಿ ಲಂಚ ಪಡೆದಿದ್ದು, ದೂರು ದಾಖಲು ಮಾಡಿಕೊಂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ.

bescom office

ಕೊಪ್ಪಳ :ನಗರದ ಜೆಸ್ಕಾಂ ಎಇಇ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಜೆಸ್ಕಾಂನ ಎಇಇ ಸಚಿನ್ ರಾಘವೇಂದ್ರ ಮನಗೊಳಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಜಮೀನಿನಲ್ಲಿ ಹೊಸ ಟಿಸಿ ಅಳವಡಿಸಲು ತಾಲೂಕಿನ ಯತ್ನಟ್ಟಿ ಗ್ರಾಮದ ಬಂದೇನವಾಜ್ಎಂಬುವರು ಮನವಿ ಸಲ್ಲಿಸಿದ್ದರು. ಇದಕ್ಕೆ ಅಧಿಕಾರಿ ಟಿಸಿ ಅಳವಡಿಸಬೇಕಾದರೆ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದರಂತೆ. ಸುಮಾರು 2000 ರೂ.ಗಳಷ್ಟು ಲಂಚ ಪಡೆದಿದ್ದಾರೆ. ಈ ಬಗ್ಗೆಅಧಿಕಾರಿಯ ವಿರುದ್ಧ ‌ನವಾಜ್ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಎಸಿಬಿ ಡಿವೈಎಸ್ಪಿ ಆರ್ ಎಸ್ ಉಜ್ಜನಕೊಪ್ಪ ನೇತೃತ್ವದ ತಂಡ ದಾಳಿ‌ ನಡೆಸಿ ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಯನ್ನ ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details