ಗಂಗಾವತಿ: ಕೊರೊನಾ ಸೋಂಕಿನಿಂದ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೋಮವಾರ ಅಭೂತಪೂರ್ವ ಗೌರವ ಸಲ್ಲಿಕೆ ಮಾಡಿದರು.
ಗುಣಮುಖಳಾದ ಮಹಿಳೆ: ಗಂಗಾವತಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಪುಷ್ಪವೃಷ್ಟಿ - gangavthi corona updates
ಗಂಗಾವತಿಯಲ್ಲಿ ಕೊರೊನಾ ಸೋಂಕಿನಿಂದ ವಿಮುಕ್ತಳಾಗಿ ಬಿಡುಗಡೆಯಾದ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೆ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಇಡೀ ಆರೋಗ್ಯ ಇಲಾಖೆ ಸಿಬ್ಬಂದಿ ಪುಷ್ಪವೃಷ್ಠಿಯ ಮೂಲಕ ಸಂತಸ ವ್ಯಕ್ತಪಡಿಸಲಾಯಿತು.
![ಗುಣಮುಖಳಾದ ಮಹಿಳೆ: ಗಂಗಾವತಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಪುಷ್ಪವೃಷ್ಟಿ A woman recovering from an corona infection in Gangavathi](https://etvbharatimages.akamaized.net/etvbharat/prod-images/768-512-7718715-893-7718715-1592806818624.jpg)
ಸೋಂಕಿನಿಂದ ಗುಣಮುಖಳಾದ ಮಹಿಳೆ
ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಪುಷ್ಪವೃಷ್ಠಿ.
ಇಲ್ಲಿನ ಕ್ವಾರಂಟೈನ್ ಕೇಂದ್ರವಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಮಹಿಳೆ ಬಿಡುಗಡೆಯಾಗುವ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಇಡೀ ಆರೋಗ್ಯ ಇಲಾಖೆ ಸಿಬ್ಬಂದಿ ಅದರಲ್ಲೂ ಮುಖ್ಯವಾಗಿ ಉಪ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವಡಿ, ತಾಲೂಕು ಆರೋಗ್ಯಾಧಿಕಾರಿ ಶರಣಪ್ಪ ಸೇರಿದಂತೆ 150 ಜನ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಅಲ್ಲದೇ ನರ್ಸ್ಗೆ ಸಹೊದ್ಯೋಗಿಗಳು ಹೂವು ಎರಚಿ ಸಂತಸದಲ್ಲಿ ಭಾಗಿಯಾದರು.