ಕರ್ನಾಟಕ

karnataka

By

Published : Sep 19, 2019, 11:40 PM IST

ETV Bharat / state

ಕೊಪ್ಪಳ ಬಸ್​ ನಿಲ್ದಾಣದಲ್ಲಿ ಬಾಂಬ್​: ವದಂತಿಗೆ ತೆರೆ ಎಳೆದ ಎಸ್​ಪಿ

ಪೊಲೀಸರು ನಡೆಸಿರುವ ಅಣಕು ಪ್ರದರ್ಶನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಸ್ ನಿಲ್ದಾಣದಲ್ಲಿ ಬಾಂಬ್ ಇಡಲು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಹಿಡಿದಿದ್ದಾರೆ ಎಂದು ವದಂತಿ ಹರಡಿತ್ತು. ವೈರಲ್ ಆದ ವಿಡಿಯೋ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

ಪೊಲೀಸರು ನಡೆಸಿರುವ ಅಣಕು ಪ್ರದರ್ಶನ ವಿಡಿಯೋ ವೈರಲ್​: ವದಂತಿಗಳಿಗೆ ತೆರೆ ಎಳೆದ ಎಸ್​ಪಿ

ಕೊಪ್ಪಳ:ಪೊಲೀಸರು ನಡೆಸಿರುವ ಅಣಕು ಪ್ರದರ್ಶನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಸ್ ನಿಲ್ದಾಣದಲ್ಲಿ ಬಾಂಬ್ ಇಡಲು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಹಿಡಿದಿದ್ದಾರೆ ಎಂದು ವದಂತಿ ಹರಡಿತ್ತು. ವೈರಲ್ ಆದ ವಿಡಿಯೋ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಅವರು ಪತ್ರಿಕಾ ಪ್ರಕಟಣೆ ನೀಡುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

ಪೊಲೀಸರು ನಡೆಸಿರುವ ಅಣಕು ಪ್ರದರ್ಶನ ವಿಡಿಯೋ ವೈರಲ್​: ವದಂತಿಗಳಿಗೆ ತೆರೆ ಎಳೆದ ಎಸ್​ಪಿ

ಭಯೋತ್ಪಾದಕರು ದಾಳಿ ನಡೆಸಿದಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅವರನ್ನು ಹೇಗೆ ಹಿಡಿಯಬೇಕು ಎಂಬುದರ ಕುರಿತು ಬುಧವಾರ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಪೊಲೀಸರು ಅಣಕು ಪ್ರದರ್ಶನ ನಡೆಸಿದ್ದರು. ಈ ಅಣಕು ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ ಜನರು ಬಸ್ ನಿಲ್ದಾಣದಲ್ಲಿ ಬಾಂಬ್ ಇಡಲು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಹಿಡಿದಿದ್ದಾರೆ ಎಂದು ಸುದ್ದಿ ಹರಡಿಸಿದ್ದರು. ಇದರಿಂದಾಗಿ ಸಾರ್ವಜನಿಕರು ಆತಂಕಗೊಂಡು ನಾನಾ ರೀತಿಯ ಚರ್ಚೆಯಲ್ಲಿ ತೊಡಗಿದ್ದರು.

ವೈರಲ್ ಆದ ವಿಡಿಯೋ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ಅದು ಡೆಮೋ ವಿಡಿಯೋ. ಹೀಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details