ಕರ್ನಾಟಕ

karnataka

ETV Bharat / state

ನವಲಿಯಲ್ಲಿ ಮರಳಿನ ದಿಬ್ಬ ಕುಸಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ - ಮಹಾರಾಷ್ಟ್ರ ಮೂಲದ 3 ಮಕ್ಕಳ ಸಾವು

ನವಲಿ ಬಳಿ ಬುಧವಾರ ಮರಳಿನ ದಿಬ್ಬ ಕುಸಿದು ಮೂರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕ ಗುರುಶಾಂತಯ್ಯ ಹಾಗೂ ಶಿವು ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಪೊಲೀಸರು ಬಂಧಿಸಲಾಗಿರುವ ಇಬ್ಬರು ಆರೋಪಿಗಳು

By

Published : Aug 30, 2019, 3:03 AM IST

Updated : Aug 30, 2019, 3:08 AM IST

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ಬುಧವಾರ ಮರಳಿನ ದಿಬ್ಬ ಕುಸಿದು ಮೂರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಮೀನು ಮಾಲೀಕ ಗುರುಶಾಂತಯ್ಯ ಹಾಗೂ ಶಿವು ಎಂಬ ಇಬ್ಬರನ್ನು ಬಂಧಿಸಲಾಗಿದೆ. ಗುರು ಶಾಂತಯ್ಯನ ಜಮೀನು ಗುತ್ತಿಗೆ ಪಡೆದು ಶಿವು ಅಕ್ರಮ ಮರಳು ಗಣಿಗಾರಿಕೆ ಮಾಡುತಿದ್ದ. ಈ ಘಟನೆ ಹಿನ್ನೆಲೆಯಲ್ಲಿ ಕನಕಗಿರಿ ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದಾರೆ.

ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಸಾವು... ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ದುರಂತ

ಮರಳಿನ ದಿಬ್ಬದಲ್ಲಿ ಆಟವಾಡುವಾಗ ದಿಬ್ಬ ಕುಸಿದು ಮಹಾರಾಷ್ಟ್ರ ಮೂಲದ 7 ವರ್ಷದ ಸೋನು, 4 ವರ್ಷದ ಸವಿತಾ ಹಾಗೂ 2 ವರ್ಷದ ಕವಿತಾ ಸಾವನ್ನಪ್ಪಿದ್ದರು. ಈ ಕುರಿತಂತೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Last Updated : Aug 30, 2019, 3:08 AM IST

ABOUT THE AUTHOR

...view details