ಕುಷ್ಟಗಿ(ಕೊಪ್ಪಳ): ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಹೆರಿಗೆಗೆ ದಾಖಲಾದ ಮಹಿಳೆ ರಕ್ತದ ಕೊರತೆಯಿಂದ ನರಳುತ್ತಿದ್ದಳು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಮಹಿಳೆ ಸಂಕಷ್ಟಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಸ್ಪಂದಿಸಿದ್ದಾರೆ.
ಹೆರಿಗೆ ಸಂದರ್ಭದಲ್ಲಿ ಮಹಿಳೆಗೆ ರಕ್ತದ ಕೊರತೆ: ಅಗತ್ಯವಾದ ರಕ್ತದ ವ್ಯವಸ್ಥೆ ಮಾಡಿದ ಶಾಸಕ ಬಯ್ಯಾಪೂರ
ಹೆರಿಗೆ ಸಮಯದಲ್ಲಿ ಮಹಿಳೆಗೆ ಅಗತ್ಯವಾದ ಓ ಪಾಸಿಟಿವ್ ಸಕಾಲಕ್ಕೆ ಸಿಗದೇ ಕಂಗಾಲಾಗಿದ್ದರು. ಈ ವೇಲೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ತಾಲೂಕಾ ಸರ್ಕಾರಿ ಆಸ್ಪತ್ರೆಯತ್ತ ದೌಡಾಯಿಸಿದ ಶಾಸಕರು, ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ರಕ್ತದ ವ್ಯವಸ್ಥೆ ಮಾಡಿಸಿದರು.
ಅಗತ್ಯವಾದ ರಕ್ತದ ವ್ಯವಸ್ಥೆ ಮಾಡಿದ ಶಾಸಕ ಬಯ್ಯಾಪೂರ
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು, ಹೊಸಪೇಟೆಯಿಂದ ಕುಷ್ಟಗಿಗೆ ವಾಪಸಾಗುತ್ತಿದ್ದರು. ಆ ವೇಳೆ ಮಹಿಳೆಗೆ ಅಗತ್ಯವಾದ ಓ ಪಾಸಿಟಿವ್ ಸಕಾಲಕ್ಕೆ ಸಿಗದೇ ಕಂಗಾಲಾಗಿದ್ದರು. ಬಳಿಕ ಶಾಸಕ ಬಯ್ಯಾಪುರ ಅವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಅವರು, ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ರಕ್ತದ ವ್ಯವಸ್ಥೆ ಮಾಡಿಸಿದರು.
ಈ ವೇಳೆ ಡಾ. ಕೆ.ಎಸ್. ರಡ್ಡಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.