ಕರ್ನಾಟಕ

karnataka

ETV Bharat / state

ಕೋವಿಡ್​​ ಕೇರ್​​ಗೆ ಕೂಡಿಟ್ಟಿದ್ದ ತನ್ನ ಹಣ ಕೊಟ್ಟ 6 ವರ್ಷದ ಬಾಲೆ.. - ದೇಣಿಗೆ ನೀಡಿರುವ ಬಾಲಕಿ

ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಇಂತಹ ಸಹಾಯ ಮಾಡುವ ಗುಣ ಹೊಂದಿರುವ ಈ ಬಾಲಕಿಯ ಕೆಲಸಕ್ಕೆ ಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಿಸಿ ಮೆಚ್ಚುಗೆ
ಡಿಸಿ ಮೆಚ್ಚುಗೆ

By

Published : Jun 9, 2020, 5:28 PM IST

ಕೊಪ್ಪಳ: 6 ವರ್ಷದ ಬಾಲಕಿಯೊಬ್ಬಳು ತಾನು ಕೂಡಿಟ್ಟಿದ್ದ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಕೋವಿಡ್ ಕೇರ್​ಗೆ ದೇಣಿಗೆ ನೀಡಿದ್ದಾಳೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದ ಸುಪ್ರಿತಾ ಚಂದಾಲಿಂಗ, ದೇಣಿಗೆ ನೀಡಿರುವ ಬಾಲಕಿ. ತಾನು ಕೂಡಿಟ್ಟಿದ್ದ 3,673 ರೂ.ಗಳನ್ನು ಜಿಲ್ಲಾಧಿಕಾರಿ ಪಿ.‌ಸುನೀಲ್​ಕುಮಾರ್ ಅವರ ಮೂಲಕ ಸರ್ಕಾರಕ್ಕೆ ನೀಡಿದಳು‌.

ಜಿಲ್ಲಾಧಿಕಾರಿಗೆ ಕೂಡಿಟ್ಟ ಹಣ ನೀಡುತ್ತಿರುವ ಬಾಲಕಿ

ಈ ಕುರಿತು ಬಾಲಕಿ ತಂದೆ ಮಾತನಾಡಿ, ನಾವು ಆಗಾಗ ಕೊಟ್ಟ ಚಿಲ್ಲರೆ ಹಣವನ್ನು ಕೂಡಿಟ್ಟಿದ್ದಳು. ಸದ್ಯದ ಪರಿಸ್ಥಿಯನ್ನು ಕಂಡು ಕೋವಿಡ್ ಕೇರ್​​ಗೆ ಹಣ ನೀಡುವುದಾಗಿ ಹೇಳಿದಳು. ಹೀಗಾಗಿ ಮಗಳನ್ನು ಕರೆತಂದು ಡಿಸಿಯವರಿಗೆ ಹಣ ತಲುಪಿಸಿದ್ದೇವೆ ಎಂದರು.

ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಇಂತಹ ಸಹಾಯ ಮಾಡುವ ಗುಣ ಹೊಂದಿರುವ ಈ ಬಾಲಕಿಯ ಕೆಲಸಕ್ಕೆ ಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details