ಕೊಪ್ಪಳ:ಸಾರಿಗೆ ಸಂಸ್ಥೆಯ ಬಸ್ ಹರಿದು ಸುಮಾರು 40 ಕುರಿಗಳು ಸಾವನ್ನಪ್ಪಿರುವ ಘಟನೆ ಕಾರಟಗಿ ತಾಲೂಕಿನ ಚನ್ನಳ್ಳಿ ಕ್ರಾಸ್ ಬಳಿ ನಡೆದಿದೆ.
ಕಾರಟಗಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹರಿದು 40 ಕುರಿಗಳು ಸಾವು - ಕೊಪ್ಪಳದಲ್ಲಿ ಸಾರಿಗೆ ಬಸ್ ಹರಿದು 40 ಕುರಿಗಳು ಸಾವು
ಸಾರಿಗೆ ಸಂಸ್ಥೆಯ ಬಸ್ ಹರಿದು ಸುಮಾರು 40 ಕುರಿಗಳು ಸಾವನ್ನಪ್ಪಿವೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚನ್ನಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.
![ಕಾರಟಗಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹರಿದು 40 ಕುರಿಗಳು ಸಾವು 40 sheep death in Koppal](https://etvbharatimages.akamaized.net/etvbharat/prod-images/768-512-5284527-thumbnail-3x2-kpl.jpg)
ಕೊಪ್ಪಳದಲ್ಲಿ ಸಾರಿಗೆ ಬಸ್ ಹರಿದು 40 ಕುರಿಗಳು ಸಾವು
ಕೊಪ್ಪಳದಲ್ಲಿ ಸಾರಿಗೆ ಬಸ್ ಹರಿದು 40 ಕುರಿಗಳು ಸಾವು
ಬೆಳಗಾವಿ ಮೂಲದ ಖಾನಪ್ಪ ಎಂಬುವರಿಗೆ ಸೇರಿದ ಕುರಿಗಳಾಗಿದ್ದು ಸುಮಾರು ಮೂರು ಲಕ್ಷ ಮೌಲ್ಯದವುಗಳಾಗಿವೆ. ಹುಬ್ಬಳ್ಳಿಯಿಂದ ರಾಯಚೂರಿಗೆ ಹೊರಟಿದ್ದ ಬಸ್ ಚನ್ನಳ್ಳಿ ಕ್ರಾಸ್ ಬಳಿ ಕುರಿಗಳ ಹಿಂಡಿನ ಮೇಲೆ ಹರಿದಿದೆ. ಪರಿಣಾಮ 40 ಕುರಿಗಳು ಬಲಿಯಾಗಿವೆ. ಕಾರಟಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
TAGGED:
40 sheep death in Koppal