ಕೋಲಾರ: ವೇತನ ನೀಡದ ಕಾರಣಕ್ಕೆ ಕೋಪಗೊಂಡ ಕಾರ್ಮಿಕರು ವಿಸ್ಟ್ರನ್ ಕಂಪನಿ ಮೇಲೆ ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕೇಂದ್ರವಲಯ ಐಜಿ ಸೀಮಂತ್ ಕುಮಾರ್ ಸಿಂಗ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿಸ್ಟ್ರನ್ ಕಂಪನಿಯಲ್ಲಿ ಕಾರ್ಮಿಕರು ಕೆಂಡಾಮಂಡಲ; ಕಾರುಗಳು, ಪೀಠೋಪಕರಣ ಧ್ವಂಸ - ಕಂಪೆನಿಗ ಮೇಲೆ ದಾಳಿ ನಡೆಸಿದ ಕಾರ್ಮಿಕರು
ವೇತನ ನೀಡದ ಹಿನ್ನೆಲೆಯಲ್ಲಿ ಕೋಪಗೊಂಡ ಕಾರ್ಮಿಕರು ವಿಸ್ಟ್ರನ್ ಕಂಪನಿ ಮೇಲೆ ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ. ತೈವಾನ್ ಮೂಲಕ ವಿಸ್ಟ್ರನ್ ಕಂಪನಿಯಲ್ಲಿ ಐಫೋನ್ಗಳನ್ನು ತಯಾರಿಸಲಾಗುತ್ತಿದೆ.
![ವಿಸ್ಟ್ರನ್ ಕಂಪನಿಯಲ್ಲಿ ಕಾರ್ಮಿಕರು ಕೆಂಡಾಮಂಡಲ; ಕಾರುಗಳು, ಪೀಠೋಪಕರಣ ಧ್ವಂಸ ವೇತನ ನೀಡಿಲ್ಲ ಎಂದು ಕಂಪೆನಿಗ ಮೇಲೆ ದಾಳಿ ನಡೆಸಿದ ಕಾರ್ಮಿಕರು](https://etvbharatimages.akamaized.net/etvbharat/prod-images/768-512-9851487-thumbnail-3x2-bng.jpg)
Workers attacked company for not paying wages at Kolar
ಕೋಲಾರದ ವಿಸ್ಟ್ರನ್ ಕಂಪನಿ ಮೇಲೆ ಕಾರ್ಮಿಕರ ದಾಳಿ
ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯಲ್ಲಿ ಕಾರ್ಮಿಕರು ಕಲ್ಲು, ರಾಡ್ಗಳಿಂದ ಅಲ್ಲಿದ್ದ ವಸ್ತುಗಳನ್ನು ಪುಡಿಗಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಂಪನಿಯಲ್ಲಿದ್ದ ಬೆಲೆಬಾಳುವ ಐಫೋನ್, ಲ್ಯಾಪ್ಟಾಪ್ ಸೇರಿದಂತೆ ಸಾಕಷ್ಟು ಉಪಕರಣಗಳನ್ನು ಒಡೆದು ಹಾಕಿದ್ದು, ಕೆಲವನ್ನು ಕೊಂಡೊಯ್ದಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸುಮಾರು 11 ಸಾವಿರ ಕಾರ್ಮಿಕರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಮಗೆ ವೇತನ ನೀಡಿಲ್ಲ ಎಂಬ ಕಾರಣಕ್ಕೆ ಕೆಂಡಾಮಂಡಲರಾದ ಕಾರ್ಮಿಕರು ಈ ಕೃತ್ಯ ಎಸಗಿದ್ದಾರೆ.
Last Updated : Dec 12, 2020, 2:47 PM IST