ಕರ್ನಾಟಕ

karnataka

ಮಾಜಿ ಸಚಿವ ವರ್ತೂರು ಪ್ರಕಾಶ್​ ಕಿಡ್ನಾಪ್ ಪ್ರಕರಣದ ಆರೋಪಿ ಅಂದರ್

By

Published : Dec 14, 2020, 8:35 PM IST

ಮಾಜಿ ಸಚಿವ ವರ್ತೂರು ಪ್ರಕಾಶ್​ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್​ನನ್ನು ಕೋಲಾರ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

kaviraj arrest
ಕವಿರಾಜ್​

ಕೋಲಾರ:ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದಮಾಜಿಸಚಿವ ವರ್ತೂರು ಪ್ರಕಾಶ್​ ಕಿಡ್ನಾಪ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಕೋಲಾರ ಪೊಲೀಸರು ಯಶಸ್ವಿಯಾಗಿದ್ದಾರೆ.

ವರ್ತೂರ್ ಪ್ರಕಾಶ್​ ಕಿಡ್ನಾಪ್​ ಆಗಿ 20 ದಿನಗಳ ನಂತರ, ಕೋಲಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿ 11 ದಿನಗಳ ನಂತರ, ಆರೋಪಿ ​ಕವಿರಾಜ್​ನನ್ನು ಕೋಲಾರ ಪೊಲೀಸರು ಬಂಧಿಸುವ ಮೂಲಕ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ವರ್ತೂರು ಪ್ರಕಾಶ್​ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್​ ಬಂಧನ

ಬಂಧಿತ ಆರೋಪಿ ಕವಿರಾಜ್​ ಅಂಡರ್ವಲ್ಡ್​​​ ರವಿ ಪೂಜಾರಿಯ ಬಂಟ ಎನ್ನಲಾಗಿದೆ. ಈತ ಮೂಲತಃ ತಮಿಳುನಾಡಿನ ಹೊಸೂರಿನವನಾಗಿದ್ದು, ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರ ತಂಡ ಚೇಜ್​ ಮಾಡಿ ತಮಿಳುನಾಡಿನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ನಂತರ ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸುವ ಜೊತೆಗೆ ಇಡೀ ಪ್ರಕಣದ ಸತ್ಯಾಂಶವನ್ನು ಬಿಚ್ಚಿಡಲಿದ್ದಾರೆ.

ಇನ್ನು ಕಿಡ್ನಾಪ್​​​ಗೂ ಮೊದಲು ಮಾಸ್ಟರ್​ ಮೈಂಡ್​ ಕವಿರಾಜ್​ ಹಾಗೂ ಆತನ ಸ್ನೇಹಿತ ರೋಹಿತ್​ ಜೈಲಿನಲ್ಲಿದ್ದ ಅಧಿಕಾರಿಯೊಬ್ಬರ ಮಾತು ಕೇಳಿ ವರ್ತೂರ್​ ಪ್ರಕಾಶ್​ ಬಳಿ ಸಾಕಷ್ಟು ಹಣವಿದೆ, ಕಳೆದ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಸಾಕಷ್ಟು ಹಣ ಮಾಡಿದ್ದಾರೆಂದು ಹೇಳಿದ್ದಾರೆ. ಅದೇ ಪ್ಲಾನ್​​ ವರ್ಕೌಟ್​ ಮಾಡಿದ ರೋಹಿತ್​ ಮತ್ತು ಕವಿರಾಜ್​ ತಾವಂದುಕೊಂಡಂತೆ ವರ್ತೂರ್​ ಪ್ರಕಾಶ್​ರನ್ನು ಕಿಡ್ನಾಪ್​ ಮಾಡಿದ್ದರು ಎನ್ನಲಾಗಿದೆ.

ಕವಿರಾಜ್​ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ವರ್ತೂರ್​ ಪ್ರಕಾಶ್​, ಕಠಿಣವಾಗಿದ್ದ ಕಿಡ್ನಾಪ್​ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಕೋಲಾರ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ವಿಚಾರಣೆ ವೇಳೆ ಹಣಕ್ಕಾಗಿ ನಡೆದಿತ್ತಾ ಇಲ್ಲಾ ಯಾರಾದ್ರೂ ಸುಪಾರಿ ಕೊಟ್ಟಿದ್ದರಾ ಅನ್ನೋ ಎಲ್ಲಾ ವಿಚಾರಗಳಿಗೂ ಈಗ ಉತ್ತರ ಸಿಗಲಿದೆ ಎಂದಿದ್ದಾರೆ.

ಒಟ್ಟಾರೆ ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಕಿಡ್ನಾಪ್ ಪ್ರಕರಣ ಪೊಲೀಸರಿಗೆ ಒಂದು ದೊಡ್ಡ ಚಾಲೆಂಜ್​ ಆಗಿತ್ತು. ಆದ್ರೆ ಅದನ್ನು ಭೇದಿಸಿದ ಖುಷಿ ಪೊಲೀಸರಿಗಿದ್ದರೆ, ಕಿಡ್ನಾಪ್​ ಪ್ರಕರಣದಿಂದ ತನ್ನ ಸುತ್ತ ಸುತ್ತಿಕೊಂಡಿದ್ದ ಹಲವು ಅನುಮಾನಗಳಿಗೆ ತೆರೆ ಬೀಳುತ್ತೆ ಅನ್ನೋ ಸಂತೋಷ ವರ್ತೂರ್​ ಪ್ರಕಾಶ್​ ಅವರದ್ದು.

ಇದನ್ನೂ ಓದಿ...ವರ್ತೂರು ಪ್ರಕಾಶ್ ಕಿಡ್ನ್ಯಾಪ್​ ಕೇಸ್​ : ಪೊಲೀಸರಿಂದ ಮತ್ತೊಬ್ಬ ಆರೋಪಿ ಬಂಧನ

ABOUT THE AUTHOR

...view details