ಕೋಲಾರ :ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಕಿಂಗ್ಪಿನ್ ಕವಿರಾಜ್ನ ಕೋಲಾರ ಪೊಲೀಸರು ಬಂಧಿಸಿದ್ದಾರೆ.
ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನ್ಯಾಪ್ ಕೇಸ್ : ಕಿಂಗ್ಪಿನ್ ಅರೆಸ್ಟ್ - ಕೋಲಾರ ಲೇಟೆಸ್ಟ್ ನ್ಯೂಸ್

12:35 December 12
ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಕಿಂಗ್ಪಿನ್ ಕವಿರಾಜ್ನ ಕೋಲಾರ ಪೊಲೀಸರು ಬಂಧಿಸಿದ್ದಾರೆ. ಈತ ವರ್ತೂರ್ ಪ್ರಕಾಶ್ ಅವರ ಪರಿಚಯಸ್ಥ ಎನ್ನಲಾಗಿದೆ.
ಕೋಲಾರದ ತಮ್ಮ ತೋಟದ ಮನೆಯಿಂದ ಚಾಲಕ ಸೇರಿ ನನ್ನನ್ನು 8 ಮಂದಿ ಅಪಹರಣಕಾರರು ನ.25ರಂದು ಅಪಹರಿಸಿದ್ದರು. ಬಳಿಕ ಮೂರು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿ ಇರಿಸಿಕೊಂಡು, 30 ಕೋಟಿ ರೂ. ಹಣ ನೀಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು
ಸದ್ಯ ತಮಿಳುನಾಡಿನಲ್ಲಿ ಕಿಂಗ್ಪಿನ್ ಕವಿರಾಜ್ನ ಅರೆಸ್ಟ್ ಮಾಡಲಾಗಿದೆ. ಈತ ವರ್ತೂರ್ ಪ್ರಕಾಶ್ ಅವರ ಪರಿಚಯಸ್ಥ ಎನ್ನಲಾಗಿದೆ.