ಕರ್ನಾಟಕ

karnataka

ETV Bharat / state

ಕೋಲಾರ​: ಶರನ್ನವರಾತ್ರಿ ಕಾರ್ಯಕ್ರಮಕ್ಕೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಿಂದ ಚಾಲನೆ... - Drive to the Sharanavavarathri program

ಇಂದಿನಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಆವನಿ ಶೃಂಗೇರಿ ಶಾಖಾ ಮಠದಲ್ಲಿ ಶರನ್ನವರಾತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

kolar
ಶರನ್ನವರಾತ್ರಿ ಕಾರ್ಯಕ್ರಮ

By

Published : Oct 17, 2020, 8:55 PM IST

ಕೋಲಾರ​:ಇಂದಿನಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಆವನಿ ಶೃಂಗೇರಿ ಶಾಖಾ ಮಠದಲ್ಲಿ ಶರನ್ನವರಾತ್ರಿ ಕಾರ್ಯಕ್ರಮಕ್ಕೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಸಚ್ಚಿದಾನಂದಮೂರ್ತಿಯವರು ಚಾಲನೆ ನೀಡಿದರು.

ಆವನಿ ಗ್ರಾಮದಲ್ಲಿ ಶೋಭಾಯಾತ್ರೆ ಹಾಗೂ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ಇಂದಿನಿಂದ ಅಕ್ಟೋಬರ್​-25 ರವರೆಗೆ ವಿವಿಧ ಹೋಮ ಹವನ ಕಾರ್ಯಕ್ರಮಗಳು ನಡೆಯಲಿದ್ದು, ಲೋಕ ಕಲ್ಯಾಣಾರ್ಥವಾಗಿ ಆಯೋಜನೆ ಮಾಡಲಾಯಿತು. ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಒಂದೊಂದು ಹೋಮ ಹಾಗೂ ತಾಯಿ ಶಾರದಾಂಬೆಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

ಆವನಿ ಗ್ರಾಮದಲ್ಲಿ ಶೋಭಾಯಾತ್ರೆ ಹಾಗೂ ಮೆರವಣಿಗೆಗೆ ಚಾಲನೆ

ಇನ್ನು ಈ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ವಿಪ್ರ ಬಂಧುಗಳು ಭಾಗಿಯಾಗಿದ್ರು. ಅಲ್ಲದೇ ಮುಳಬಾಗಿಲು ತಾಲೂಕಿನ ಆವನಿ ಗ್ರಾಮದಲ್ಲಿ ಶೋಭಾ ಯಾತ್ರೆ ಹಾಗೂ ಮೆರವಣಿಗೆ ಮಾಡಿದರು. ಇಂದಿನಿಂದ ಅಕ್ಟೋಬರ್​-25 ರವರೆಗೆ ವಿವಿಧ ಹೋಮ ಹವನ ಕಾರ್ಯಕ್ರಮಗಳು ನಡೆಯಲಿವೆ.

For All Latest Updates

ABOUT THE AUTHOR

...view details