ಕರ್ನಾಟಕ

karnataka

ETV Bharat / state

ಮುನಿಯಪ್ಪ ವಿರುದ್ಧ ಪ್ರಚಾರಕ್ಕಿಳಿದ ಸ್ವಪಕ್ಷೀಯರು... ವಿರೋಧಿ ಅಲೆಗೆ ಛಿದ್ರವಾಗುತ್ತಾ 'ಕೈ' ಭದ್ರಕೋಟೆ..?

ಮೈತ್ರಿ ಸರ್ಕಾರವಿರುವ ಕಾರಣ ಸದ್ಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್​​​ಗೆ ​ ವರವಾಗಿ ಪರಿಣಮಿಸಿದೆ. ಹೀಗಾಗಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲ್ಲೋದು ಪಕ್ಕಾ ಎಂದೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ ಇಲ್ಲಿನ ಪರಿಸ್ಥಿತಿನೇ ಬೇರೆ ಇದೆ.

By

Published : Apr 2, 2019, 7:51 PM IST

ಮುನಿಯಪ್ಪ

ಕೋಲಾರ:ಕಾಂಗ್ರೆಸ್​​​ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅನ್ನು ಸೋಲಿಸಲು ಸ್ವತಃ ಕೈ ನಾಯಕರೇ ಪಣ ತೊಟ್ಟಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್​​​ ಶಾಸಕರು, ಒಂದು ಕಡೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ, ಹಾಗೂ ಇನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ.

ಮೈತ್ರಿ ಸರ್ಕಾರವಿರುವ ಕಾರಣ ಸದ್ಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್​​ಗೆ ​ ವರವಾಗಿ ಪರಿಣಮಿಸಿದೆ. ಹೀಗಾಗಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲ್ಲೋದು ಪಕ್ಕಾ ಎಂದೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ ಇಲ್ಲಿನ ಪರಿಸ್ಥಿತಿನೇ ಬೇರೆ ಇದೆ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್​ ಅಭ್ಯರ್ಥಿ ವಿರುದ್ದ ತಿರುಗಿ ಬಿದ್ದಿರುವ ಜಿಲ್ಲೆಯ ಕಾಂಗ್ರೆಸ್​ ಶಾಸಕರು ಹಾಗೂ ಮುಖಂಡರು ಶತಾಯಗತಾಯ ಈ ಬಾರಿ ಕಾಂಗ್ರೆಸ್​ ಅಭ್ಯರ್ಥಿ ಕೆ.ಹೆಚ್.​ಮುನಿಯಪ್ಪ ಸೋಲಿಗೆ ಪಣ ತೊಟ್ಟು ನಿಂತಿದ್ದಾರೆ.

ಪರಿಣಾಮ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮತ್ತು ಮುನಿಯಪ್ಪ ಪುತ್ರಿ ರೂಪಕಲಾ ಹೊರತುಪಡಿಸಿ ಯಾರೊಬ್ಬ ಕಾಂಗ್ರೆಸ್ ಹಾಗೂ ಜೆಡಿಎಸ್​ ಶಾಸಕರು​ ಕೈ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿಲ್ಲ. ಅಭ್ಯರ್ಥಿ ಮುನಿಯಪ್ಪರ ಸಂಪರ್ಕಕ್ಕೂ ಯಾರೂ ಸಿಗುತ್ತಿಲ್ಲವಂತೆ.

ಮುನಿಯಪ್ಪ ವಿರುದ್ಧ ಪ್ರಚಾರಕ್ಕಿಳಿದ ಕಾಂಗ್ರೆಸ್ ಶಾಸಕರು

ವಿರೋಧಿ ಅಲೆಗೆ 'ಕೈ' ಕೆಳಗಾಗುತ್ತಾ..?

ಇನ್ನು ಈ ಬಾರಿ ಕ್ಷೇತ್ರದಲ್ಲಿ ಮುನಿಯಪ್ಪ ವಿರೋಧಿ ಅಲೆ ಮೋದಿ ಅಲೆಗಿಂತ ಜೋರಾಗಿದೆ. ಪರಿಣಾಮವಾಗಿ ಯಾರೊಬ್ಬ ನಾಯಕರು ಅಭ್ಯರ್ಥಿ ಪರ ಮತಯಾಚನೆ ಮಾಡಲು ತಯಾರಿಲ್ಲ. ಹೀಗಾಗಿ ಕಾಂಗ್ರೆಸ್​ ಅಭ್ಯರ್ಥಿ ವಿರುದ್ದ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಹಾಲಿ ಶಾಸಕ ಹೆಚ್​.ನಾಗೇಶ್, ಮಾಲೂರು ಮಾಜಿ ಜೆ.ಡಿ.ಎಸ್.​ ಶಾಸಕ ಮಂಜುನಾಥಗೌಡ, ಕೋಲಾರ ಹಾಲಿ ಶಾಸಕ ಶ್ರೀನಿವಾಸಗೌಡ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್​ ಬಹಿರಂಗವಾಗಿಯೇ ಪ್ರಚಾರಕ್ಕಿಳಿದಿದ್ದಾರೆ.

ಕಾಂಗ್ರೆಸ್ ಶಾಸಕ​ ರಮೇಶ್​ ಕುಮಾರ್​, ಎಸ್​.ಎನ್​.ನಾರಾಯಣ ಸ್ವಾಮಿ, ಶಿಡ್ಲಘಟ್ಟ ವಿ.ಮುನಿಯಪ್ಪ, ತೆರೆ ಮರೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ. ಅದು ಬಿಜೆಪಿ ಅಭ್ಯರ್ಥಿ ಮಾತಿನಲ್ಲೂ ಸ್ಪಷ್ಟವಾಗಿ ಹೊರಬಂದಿದೆ. ಜೊತೆಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್​ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಒಟ್ಟಾರೆ ಕಾಂಗ್ರೆಸ್​ನ ಭದ್ರಕೋಟೆ ಕೋಲಾರ ಲೋಕಸಭಾ ಕ್ಷೇತ್ರ ಕೈ ತಪ್ಪುವ ಭೀತಿಯಲ್ಲಿದೆ. ಸ್ವಪಕ್ಷೀಯರೇ ತಮ್ಮ​ ಅಭ್ಯರ್ಥಿಯನ್ನು ಸೋಲಿಸಲು ಪಣ ತೊಟ್ಟಿರುವುದು ಎಷ್ಟು ವರ್ಕೌಟ್ ಆಗಿದೆ ಅನ್ನೋದು ಮೇ 23ರಂದು ತಿಳಿಯಲಿದೆ.

ABOUT THE AUTHOR

...view details