ಕರ್ನಾಟಕ

karnataka

ETV Bharat / state

ಒಂಟಿ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ, ದರೋಡೆ.. ಅದೇ ಬೀದಿಯ ಮೂರು ಅಂಗಡಿಗಳಲ್ಲಿ ಸರಣಿ  ಕಳ್ಳತನ - ಸರಣಿಗಳ್ಳತನ

ಮನೆಯಲ್ಲಿದ್ದ ಅರ್ಚಕ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ನಡೆಸಿ, ದುಷ್ಕರ್ಮಿಗಳು ಮನೆಯಲ್ಲಿದ್ದ ಹಣ ದೋಚಿದ್ದಾರೆ.

Robbery and theft in Kolara
ಒಂಟಿ ಮನೆ ಮೇಲೆ ದಾಳಿ ನಡೆಸಿ ದರೋಡೆ

By ETV Bharat Karnataka Team

Published : Oct 21, 2023, 1:10 PM IST

Updated : Oct 21, 2023, 3:25 PM IST

ಕೋಲಾರ: ಒಂಟಿ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ದರೋಡೆ ಮಾಡಿದ್ದು ಮಾತ್ರವಲ್ಲದೇ ನಂತರ ಸರಣಿಗಳ್ಳತನ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮಾಲೂರು ತಾಲೂಕಿನ ತೊಳಕನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ದರೋಡೆ ಮಾಡಿದ್ದಾರೆ.

ಗ್ರಾಮದ ಅರ್ಚಕ ದೊಡ್ಡನರಸಯ್ಯ ಎಂಬುವರ ಮನೆ ಮೇಲೆ ಆರು ಜನ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಲಾಂಗು ಮಚ್ಚು ತೋರಿಸಿ ಅರ್ಚಕ ಹಾಗೂ ಅರ್ಚಕನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಸಾವಿರಾರು ರೂಪಾಯಿ ನಗನಾಣ್ಯಗಳನ್ನು ದೋಚಿ ಪರಾರಿಯಾಗಿದ್ದಾರೆ. ಇನ್ನು ಗಾಯಗೊಂಡ ಅರ್ಚಕ ಹಾಗೂ ಅವರ ಪತ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅದೇ ಮಾರ್ಗ ಮಧ್ಯೆ ಯಟ್ಟಕೋಡಿ ಗ್ರಾಮದ ಬಳಿ‌ ಇರುವ ಮೂರು ಅಂಗಡಿಗಳಿಗೆ ನುಗ್ಗಿ ಮೂರು ಅಂಗಡಿಯಲ್ಲಿದ್ದ ಸುಮಾರು 15 ಲಕ್ಷ ಮೌಲ್ಯದ ಗುಟ್ಕಾ ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನು, ಘಟನೆ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದರೆ, ಮಾಲೂರು ಪೊಲೀಸ್ ಠಾಣೆಯಲ್ಲಿ ಸರಣಿಗಳ್ಳತನ ಪ್ರಕರಣ ದಾಖಲಾಗಿದೆ.

ಮೆಡಿಕಲ್​ ಶಾಪ್​ನಲ್ಲಿ ಕಳ್ಳತನ: ನ್ಯಾಯಾಲಯದ ಮುಂಭಾಗದಲ್ಲಿ ಇರುವ ಮೆಡಿಕಲ್​ ಶಾಪ್​ನಲ್ಲಿ ಕಳ್ಳರ ಗುಂಪೊಂದು ಕಳ್ಳತನ ಮಾಡಿದ್ದ ಘಟನೆ ಇತ್ತೀಚೆಗೆ ರಾಮನಗರದಲ್ಲಿ ನಡೆದಿತ್ತು. ಬೆಳಗ್ಗಿನ ಜಾವ ದ್ವಿಚಕ್ರ ವಾಹನದಲ್ಲಿ ಬಂದಿದ್ದ ನಾಲ್ಕು ಜನರ ಗುಂಪು, ಚನ್ನಪಟ್ಟಣ ನಗರದ ನ್ಯಾಯಾಲಯದ ಮುಂದೆ ಇರುವ ಭಾಸ್ಕರ್​ ಮೆಡಿಕಲ್​ ಅಂಗಡಿಯ ಬೀಗ ಒಡೆದು ಒಳ ನುಗ್ಗಿದ್ದರು. ನಂತರ ಅಂಗಡಿಯಲ್ಲಿದ್ದ ಹಣ ಹಾಗೂ ಕೆಲವು ವಸ್ತುಗಳನ್ನೂ ಕೂಡ ದೋಚಿದ್ದರು.

ಕಳ್ಳತನದ ದೃಶ್ಯ ಅಂಗಡಿಯ ಒಳಗೆ ಹೊರಗೆ ಇದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯದಲ್ಲಿ ಇಬ್ಬರು ಕಳ್ಳರು ಅಂಗಡಿ ಒಳಗೆ ಹಣ ವಸ್ತುಗಳನ್ನು ದೋಚುತ್ತಿದ್ದರೆ, ಮತ್ತೆ ಇಬ್ಬರು ಹೊರಗಡೆ ನಿಂತು ಕಾಯುತ್ತಿರುವುದು ಸೆರೆಯಾಗಿತ್ತು. ದೃಶ್ಯದ ಜೊತೆಗೆ ಯುವಕರು ಮಾತನಾಡುತ್ತಿರುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್​ ಆಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದಹಿರಿಯ ಪೊಲೀಸ್​ ಅಧಿಕಾರಿಗಳು ಹಾಗೂ ರಾಮನಗರ ಎಸ್​ಪಿ ಕಾರ್ತಿಕ್​ ರೆಡ್ಡಿ ಕೂಡಲೇ ಆರೋಪಿಗಳನ್ನು ಸೆರೆ ಹಿಡಿಯುವುದಾಗಿ ತಿಳಿಸಿದ್ದರು.​

ಇದನ್ನೂ ಓದಿ :ರಾಮನಗರ: ಕೋರ್ಟ್‌ ಮುಂಭಾಗದ ಮೆಡಿಕಲ್ಸ್ ಶಾಪ್​ನಲ್ಲಿ ಕಳ್ಳತನ- ಸಿಸಿಟಿವಿ ವಿಡಿಯೋ

Last Updated : Oct 21, 2023, 3:25 PM IST

ABOUT THE AUTHOR

...view details