ಕರ್ನಾಟಕ

karnataka

ETV Bharat / state

ಶರತ್​ ಅವರನ್ನ ಪಕ್ಷಕ್ಕೆ ಸೇರಿಸಬಾರದೆಂದು ಎಂಟಿಬಿ ಷರತ್ತು ಹಾಕಿದ್ದಾರೆ: ನಾಗೇಶ್ - ಸಚಿವ ನಾಗೇಶ್ ಲೆಟೆಸ್ಟ್ ನ್ಯೂಸ್​

ಎಂಟಿಬಿ ನಾಗರಾಜ್ ಅವರು ಯಾವುದೇ ಕಾರಣಕ್ಕೂ ಶರತ್​​ರವರನ್ನುಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು​ ಷರತ್ತು​ ಹಾಕಿದ್ದಾರೆ. ಅದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ಶರತ್​ ಬಿಟ್ಟು ಕೊಟ್ಟಿದ್ರೆ ಎಂಟಿಬಿ ಗೆದ್ದು ಮಂತ್ರಿಯಾಗುತ್ತಿದ್ದರು : ಸಚಿವ ನಾಗೇಶ್

ಸಚಿವ ನಾಗೇಶ್​
Minister Nagesh

By

Published : Dec 14, 2019, 7:57 PM IST

ಕೋಲಾರ :ಸರ್ಕಾರ ಸುಭದ್ರವಾಗುತ್ತಿದಂತೆ ಸಚಿವ ನಾಗೇಶ್ ಅಲರ್ಟ್ ಆಗಿದ್ದು, ಐದಾರು ವರ್ಷಗಳಿಂದ ಬೀಗ ಹಾಕಿದ್ದ ಕಚೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಬೀಗ ಹಾಕಿದ್ದ ಕಚೇರಿಗೆ ಚಾಲನೆ ನೀಡಿದ ಸಚಿವ ನಾಗೇಶ್​

ಕಳೆದ‌ ಐದಾರು ವರ್ಷಗಳಿಂದ ಬೀಗ ಹಾಕಿದ್ದ ಕಚೇರಿಗೆ ಇಂದು ಸಚಿವ ನಾಗೇಶ್​ ಭೇಟಿ ನೀಡಿ ಕೆಲಸಕ್ಕೆ ಮುಂದಾದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್​ರವರಿಗೆ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ಆದರೆ ಗೆದ್ದಿರುವವರಿಗೆ ಮೊದಲ ಆದ್ಯತೆ, ಎಂಎಲ್​ಸಿ ಮಾಡೋದಕ್ಕೂ ಕಾಲಾವಕಾಶ ಬೇಕು. ಗೆದ್ದಿರುವವರೆಲ್ಲಾ ಎಂಟಿಬಿ ಹಾಗೂ ವಿಶ್ವನಾಥ್​ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ ಎಂದರು.

ನಾನು ಕೂಡಾ ಶಿಫಾರಸು​​ ಮಾಡ್ತಿದ್ದೇನೆ. ಅವರೆಲ್ಲಾ ಸೋತರೂ ಗೆದ್ದಂತೆ. ಸರ್ಕಾರ ರಚನೆಯಾಗೋದಕ್ಕೆ ಅವರೇ ಕಾರಣ. ಹಾಗಾಗಿ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ ಎಂದರು.

ಇನ್ನು ಶರತ್​ ವಿಚಾರವಾಗಿ ಪ್ರತಿಕ್ರಿಯಿಸಿ, ಶರತ್​ ಅವರನ್ನು ಮತ್ತೆ ಪಕ್ಷಕ್ಕೆ ಕರೆ ತರುವ ವಿಚಾರ ನನಗೆ ಗೊತ್ತಿಲ್ಲ. ಎಂಟಿಬಿ ನಾಗರಾಜ್ ಅವರು ಯಾವುದೇ ಕಾರಣಕ್ಕೂ ಶರತ್​​ರವರನ್ನುಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು​ ಷರತ್ತು​ ಹಾಕಿದ್ದಾರೆ. ಅದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ಶರತ್​ ಬಿಟ್ಟು ಕೊಟ್ಟಿದ್ರೆ ಎಂಟಿಬಿ ಗೆದ್ದು ಮಂತ್ರಿಯಾಗುತ್ತಿದ್ದರು ಎಂದರು.

ಇನ್ನು ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿ, ಇರುವ ಹುದ್ದೆಗಳನ್ನೇ ತೆಗೆಯಲು ಚಿಂತನೆ ಇದೆ. ಹಾಗೊಂದು ವೇಳೆ ಕೊಟ್ಟರೆ ರಮೇಶ್​ ಜಾರಕಿಹೊಳಿ ಮತ್ತು ಶ್ರೀರಾಮುಲುಗೆ ನೀಡುವ ಬಗ್ಗೆ ಚಿಂತನೆ ಇದೆ. ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸ ಅಡ್ಡಿಯಾಗಲ್ಲ. ಡಿ.22 ರೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದರು.

ABOUT THE AUTHOR

...view details