ಕರ್ನಾಟಕ

karnataka

ETV Bharat / state

ಕೋಲಾರ: ಎನ್​ಒಸಿ ನೀಡದ್ದಕ್ಕೆ ಸಿಇಒ ಮೇಲೆ ಹಲ್ಲೆ, ಕೊಲೆ ಬೆದರಿಕೆ - Attack on CEO for not issueing NOC to Narayanaswami

ಸಹಕಾರ ಸಂಘದ ಸಿಇಒ ಸುಧಾಕರ್ ಮೇಲೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಇಂದುಮಂಗಲ ಗ್ರಾಮದ ನಾರಾಯಣಸ್ವಾಮಿ ಎಂಬಾತ ಹಲ್ಲೆ ನಡೆಸಿದ್ದಾನೆ. ಸಾಲ ಮರುಪಾವತಿಸದ ಕಾರಣ ಎನ್​ಒಸಿ ನೀಡಲು ಅಧಿಕಾರಿ ನಿರಾಕರಿಸಿದ್ದು, ಇದಕ್ಕೆ ಆತ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಎನ್​ಓಸಿ ನೀಡದಕ್ಕೆ ಸಿಇಓ ಮೇಲೆ ಹಲ್ಲೆ
ಎನ್​ಓಸಿ ನೀಡದಕ್ಕೆ ಸಿಇಓ ಮೇಲೆ ಹಲ್ಲೆ

By

Published : Dec 15, 2020, 4:39 PM IST

ಕೋಲಾರ:ಸಾಲ ಮರು ಪಾವತಿಸದ ಕಾರಣ ಎನ್​ಒಸಿ ನೀಡದ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದಿದೆ. ಈ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಹಕಾರ ಸಂಘದ ಸಿಇಒ ಸುಧಾಕರ್ ಮೇಲೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಇಂದುಮಂಗಲ ಗ್ರಾಮದ ನಾರಾಯಣಸ್ವಾಮಿ ಎಂಬಾತ ಹಲ್ಲೆ ನಡೆಸಿದ್ದಾನೆ. ಈಗಾಗಲೇ ತೆಗೆದುಕೊಂಡಿದ್ದ ಸಾಲ‌ ಮರುಪಾವತಿ ಮಾಡದೇ ಎನ್​ಒಸಿಗೆ ಸೀಲ್ ಹಾಕುವಂತೆ ಸಿಬ್ಬಂದಿ ಮೇಲೆ ನಾರಾಯಣಸ್ವಾಮಿ ಒತ್ತಡ ಹಾಕಿದ್ದಾನೆ ಎನ್ನಲಾಗಿದೆ.

ಓದಿ:ಹಾವೇರಿ ಜಿಲ್ಲಾ ಕಾರಾಗೃಹ ಅಧೀಕ್ಷಕ - ಸಿಬ್ಬಂದಿ ನಡುವೆ ಗಲಾಟೆ: ತನಿಖೆಗೆ ಡಾ.ರಂಗನಾಥ್​​ ನೇಮಕ

ಸಾಲ ಮರುಪಾವತಿಸದೇ ಎನ್​ಒಸಿ ಕೊಡಲು ಸಿಬ್ಬಂದಿ ಒಪ್ಪದ ಕಾರಣ ಏಕಾಏಕಿ ಸಂಘದ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾನೆ. ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ನಾರಾಯಣಸ್ವಾಮಿ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details