ಕರ್ನಾಟಕ

karnataka

By

Published : Jul 10, 2022, 3:48 PM IST

ETV Bharat / state

ಬಂಗಾರಪೇಟೆಯಲ್ಲಿ ಹಾಡಹಗಲೇ ನಿವೃತ್ತ ಎಎಸ್ಐ ಮನೆಯಲ್ಲಿ ಕಳ್ಳತನ

ಬಂಗಾರಪೇಟೆಯಲ್ಲಿ ನಿವೃತ್ತ ಅಧಿಕಾರಿ ಮನೆಗೆ ಕನ್ನ- ಹಾಡಹಗಲೇ ನಿವೃತ್ತ ಎಎಸ್​ಐ ಮನೆಯಲ್ಲಿ ಕಳ್ಳತನ-ಸಿಸಿಟಿವಿಯಲ್ಲಿ ಕೃತ್ಯ ಸೆರೆ

ನಿವೃತ್ತ ಎಎಸ್ಐ ಅಧಿಕಾರಿ ಮನೆ
ನಿವೃತ್ತ ಎಎಸ್ಐ ಅಧಿಕಾರಿ ಮನೆ

ಕೋಲಾರ: ಹಾಡಹಗಲೇ ನಿವೃತ್ತ ಎಎಸ್ಐ ಮನೆಯಲ್ಲಿ ಕಳ್ಳತನವಾಗಿರುವ ಪ್ರಕರಣ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಅಕ್ಕಚಕ್ಕಮ್ಮ ಕಲ್ಯಾಣ ಮಂಟಪದ ಹಿಂಭಾಗದ ಮನೆಯಲ್ಲಿ ನಡೆದಿದೆ.

ಹಾಡಹಗಲೇ ನಿವೃತ್ತ ಎಎಸ್ಐ ಅಧಿಕಾರಿ ಮನೆಯಲ್ಲಿ ಕಳ್ಳತನ

ನಿವೃತ್ತ ಎಎಸ್​ಐ ಮಲ್ಲಿಕಾರ್ಜುನಯ್ಯ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಕೆಂಪು ಬಣ್ಣದ ಕಾರ್‌ನಲ್ಲಿ ಬಂದ ವ್ಯಕ್ತಿ ಈ ಕೃತ್ಯ ಎಸಗಿದ್ದು, ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದೆ. ಮನೆಯಲ್ಲಿ ಮಹಿಳೆ ಹಾಗೂ ಮಗು ಇಬ್ಬರೇ ಇರುವುದನ್ನ ಗಮನಿಸಿದ ಚಾಲಾಕಿ ಕಳ್ಳ ಹೊಂಚು ಹಾಕಿ ಮನೆಯಲ್ಲಿದ್ದ ಮಹಿಳೆ ಟೆರೇಸ್ ಮೇಲೆ ಬಟ್ಟೆ ಒಣಗಿ ಹಾಕಲು ತೆರಳಿದ್ದ ವೇಳೆ ಮನೆಗೆ ಬಂದು ಕಳ್ಳತನ ಮಾಡಿದ್ದಾನೆ.

ಮನೆಯ ಬೀರುವಿನಲ್ಲಿದ್ದ 30 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಳ: ನದಿಪಾತ್ರದ ಜನರಿಗೆ ಎಚ್ಚರಿಕೆ

ABOUT THE AUTHOR

...view details