ಕೋಲಾರ: ಮುಳಬಾಗಿಲು ತಾಲೂಕಿನಲ್ಲಿನ ಕಂಟೇನ್ಮೆಂಟ್ ಪ್ರದೆಶದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿದರು.
ಮುಳಬಾಗಿಲಿನ ಕಂಟೇನ್ಮೆಂಟ್ ಪ್ರದೇಶದಲ್ಲಿ ಮಾಜಿ ಶಾಸಕರಿಂದ ದಿನಸಿ ಕಿಟ್ ವಿತರಣೆ - latest news for kottur manjunath
ಮುಳಬಾಗಿಲು ಪಟ್ಟಣದ ಬೂಸಾಲಕುಂಟೆ ಹಾಗೂ ಬೆಳಗಾನಹಳ್ಳಿ, ವಿ.ಹೊಸಹಳ್ಳಿ, ಬೈರಸಂದ್ರ, ಸೊಣ್ಣವಾಡಿ, ಗ್ರಾಮಗಳ ಒಟ್ಟು 500 ಕುಟುಂಬಗಳಿಗೆ ಸುಮಾರು 36 ಬಗೆಯ ದಿನ ಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.
![ಮುಳಬಾಗಿಲಿನ ಕಂಟೇನ್ಮೆಂಟ್ ಪ್ರದೇಶದಲ್ಲಿ ಮಾಜಿ ಶಾಸಕರಿಂದ ದಿನಸಿ ಕಿಟ್ ವಿತರಣೆ former-mla-manjunath-providing-food](https://etvbharatimages.akamaized.net/etvbharat/prod-images/768-512-7247425-807-7247425-1589797529477.jpg)
ಮುಳಬಾಗಿಲು ಪಟ್ಟಣದ ಬೂಸಾಲಕುಂಟೆ ಹಾಗೂ ಬೆಳಗಾನಹಳ್ಳಿ, ವಿ. ಹೊಸಹಳ್ಳಿ, ಬೈರಸಂದ್ರ, ಸೊಣ್ಣವಾಡಿ, ಗ್ರಾಮಗಳ ಒಟ್ಟು 500 ಕುಟುಂಬಗಳಿಗೆ ಸುಮಾರು 36 ಬಗೆಯ ದಿನ ಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಿದ್ರು.
ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಮೂಲಕ ಆ ಗ್ರಾಮಗಳಿಗೆ ಮಾಜಿ ಶಾಸಕರು ಸಾಮಗ್ರಿಗಳನ್ನು ತಲುಪಿಸಿದರು. ಈ ಸಂರ್ದದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. ಜನರು ಮನೆಯಿಂದ ಹೊರ ಬಾರದಂತೆ ಹೇಳಿದರು. ಕೊತ್ತೂರು ಮಂಜುನಾಥ್ ಲಾಕ್ಡೌನ್ ಆದ ದಿನದಿಂದ ಇಲ್ಲಿಯವರೆಗೆ ಸುಮಾರು 75 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.